May 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆ

ಆರಂತೋಡು ಗ್ರಾಮದಲ್ಲಿ ವಿವಿಧ ಕ್ಷೆತ್ರದಲ್ಲಿ ಸಮಾಜ ಸೇವೆಯನ್ನು ನಡೆಸುತ್ತಾ ಬರುವ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆಯು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಸ್ಲಾಂ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮುಕ್ತರ್ ಪಟೇಲ್ ಮಾತನಾಡಿ ಕ್ಲಬ್ ನ ಉದ್ದೇಶ ಹಾಗೂ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಯನ್ನು ನೀಡಿದರು. ನಂತರ ನೂತನ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷ ಅನ್ವರ್ ಕೆ.ಎಂ. ದುಬೈ, ಅಧ್ಯಕ್ಷ ಆಶಿಕ್ ಆರಂತೋಡು, ಪ್ರಧಾನ ಕಾರ್ಯದರ್ಶಿ ಕಬೀರ್ ಸಂಟ್ಯಾರ್, ಖಜಾಂಜಿ ಮುಝಮ್ಮಿಲ್ ಕೆ. ಎಂ., ಉಪಾಧ್ಯಕ್ಷರಾಗಿ ಶರಪು ಆರಂತೋಡು ಹಾಗೂ ಅದ್ನಾನ್ ಪಟೇಲ್, ಜೊತೆ ಕಾರ್ಯದರ್ಶಿ ಯಾಗಿ ಮಿಸ್ಬ ಕೆ.ಎಂ. ಹಾಗೂ ಅನ್ಸಫ್ ಕೊಡೆoಕೆರಿ, ಸಂಘಟನೆ ಕಾರ್ಯದರ್ಶಿ ಅನಸ್ ರವರನ್ನು ಅರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಹಬಾಜ್ ಎ., ಮುನೀರ್ ಸಂಟ್ಯಾರ್, ಅಭಿದ್ ದುಬೈ, ರಹೀಮ್ ಬೆಂಗಳೂರು, ಝುಬೈರ್ ಎ., ಸುಹೈಲ್ ಮಂಗಳೂರು, ಮುಕ್ತರ್ ಪಟೇಲ್ ದುಬೈ, ರಾಫಿ ಅರಿಕ್ಕಾಡಿ, ಅಸ್ಲಾಂ ಪಟೇಲ್ ದುಬೈ, ಸಾಲಿಹ್ ದುಬೈ, ಸಲಾವುದ್ದಿನ್ ಪಟೇಲ್ ದುಬೈ, ಹಬೀಬ್ ಗುಂಡಿ ಸೌದಿ ಅರೇಬಿಯಾ, ಸೈಫುದ್ದಿನ್ ಪಟೇಲ್ ದುಬೈ, ಇಕ್ಬಲ್ ಗುಂಡಿ ರವರನ್ನು ನೇಮಕ ಮಾಡಲಾಯಿತು.

ಸಲಹಾ ಸಮಿತಿಯ ಸದಸ್ಯರಾಗಿ ಹಾಜಿ ಅಜಾರುದ್ದಿನ್, ಸಾಬಿತ್ ಸುಳ್ಯ, ಅಶ್ರೀದ್ ಗುಂಡಿ ಸೌದಿ ಅರೇಬಿಯಾ, ಫಯಾಝ್ ಪಟೇಲ್ ದುಬೈ ಹಾಗೂ ಸಾಬಿತ್ ದುಬೈ ರವರನ್ನು ನೇಮಕ ಮಾಡಲಾಯಿತು.

You may also like

News

ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ – ಇ-ಫಾರ್ಮಸಿ ವಿರೋಧಿಸಿ ದಕ್ಷಿಣ ಕನ್ನಡದಲ್ಲೂ ಔಷಧ ಅಂಗಡಿಗಳು ಸ್ಥಗಿತ!

ಆನ್‌ಲೈನ್ ಮೂಲಕ ನಿಯಮಬಾಹಿರವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘವು ಮೇ 20 ರಂದು ದೇಶಾದ್ಯಂತ ಔಷಧ ವ್ಯಾಪಾರ ಬಂದ್‌ಗೆ ಕರೆ
News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ

You cannot copy content of this page