May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಜಿ ಸೈನಿಕರಿಂದ ಗುತ್ತಿಗೆ ನವೀಕರಿಸಲು ಪುತ್ತೂರು ಶಾಸಕ ಅಶೋಕ್ ರೈಯವರಿಗೆ ವಿನಂತಿ ಪತ್ರ

ಕರ್ನಾಟಕದ ವಿವಿಧ ಭಾಗಗಳಲ್ಲಿ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆಯ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಗಳಿಗೆ ಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುವ ಮಾಜಿ ಸೈನಿಕರ ಕೆಲಸವು ಇದೇ ವರ್ಷದ ಮೇ 22ರಂದು ಮುಕ್ತಾಯಗೊಂಡಿದೆ. ಆದರೆ ಎರಡು ತಿಂಗಳಾದರೂ ಕೂಡ ಇದನ್ನು ನವೀಕರಿಸಿಲ್ಲ. ಆದುದರಿಂದ ಈ ಕೆಲಸವನ್ನು ಮಾಡುವ ಸುಮಾರು 12 ಜನ ಮಾಜಿ ಸೈನಿಕರು ಇದನ್ನು ನವೀಕರಣಗೊಳಿಸಲು ಸಂಬಂಧಪಟ್ಟ ಸರಕಾರದ ಅಧಿಕಾರಿಗಳ ಗಮನಕ್ಕೆ ತರುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಲಿಖಿತ ಪತ್ರ ಒಂದನ್ನು ನೀಡಿದ್ದಾರೆ.

ಈ ಪತ್ರಕ್ಕೆ ಮಾಜಿ ಸೈನಿಕರಾದ ಸುನಿಲ್ ಕುಮಾರ್, ಅಶೋಕ್ ಎಂ., ರಾಜೇಶ್, ಮೋಹನ್ ಎಸ್., ವಿಶ್ವನಾಥ ಕೊಳ್ಕೆ, ರಂಜಿತ್ ಶೆಟ್ಟಿ, ಜಗದೀಶ್ ಎಂ., ಉಮೇಶ್ ಎನ್., ಶಿವಪ್ರಸಾದ್ ಡಿ.ಕೆ., ದಿನೇಶ್ ಎಸ್., ಪುರಂದರ ಗೌಡ ಹಾಗೂ ಬೇಬಿ ಟಿ. ಸಹಿ ಹಾಕಿದ್ದಾರೆ.

You may also like

News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ

You cannot copy content of this page