April 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

KSRTC ಮಾಜಿ MD ಸಹಿಯನ್ನೇ ನಕಲು ಮಾಡಿ ಲಕ್ಷ ಲಕ್ಷ ವಂಚನೆ ಎಸಗಿದ ಖದೀಮ ರಿಚ್ಚರ್ಡ್

ಖದೀಮನೊಬ್ಬ ನಿಕಟಪೂರ್ವ KSRTC MD ಅನ್ಬುಕುಮಾರ್  ರವರ ಸಹಿಯನ್ನೇ ನಕಲು ಮಾಡಿ ಲಕ್ಷ ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. KSRTC MDಯವರ ಸಹಿಯನ್ನೇ ನಕಲು ಮಾಡಿದ ಭೂಪ KSRTC ಸಿಬ್ಬಂದಿಯೋರ್ವನಿಗೆ ಸಹಿ ತೋರಿಸಿ ಯಾಮಾರಿಸಿದ್ದಾನೆ. ಸಂತ್ರಸ್ತ ಸಿಬ್ಬಂದಿಯಿಂದ ಸುಮಾರು 1.35 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಲೂಟಿ ಮಾಡಿದ್ದಾನೆ.

ಲೆಕ್ಕಪತ್ರ ಶಾಖೆಯಲ್ಲಿ ಕೆಲಸ ಮಾಡ್ತಿರೋ ರಿಚರ್ಡ್ ಎಂಬಾತ ಈ ಕೃತ್ಯ ಎಸಗಿದ್ದು, ಇದೇ ರೀತಿ ಹಲವು ಸಿಬ್ಬಂದಿಗಳಿಗೂ ಈತ ಎಂಡಿ ಸಹಿ ನಕಲು ಮಾಡಿ ವಂಚಿಸಿರುವ ಆರೋಪ ಕೇಳಿಬಂದಿದೆ. ಸಾಗರ ಡಿಪೋದ ನಾಗರಾಜ್ ಕುಗ್ವೆ ಎಂಬ ಸಿಬ್ಬಂದಿ ವಂಚನೆಗೆ ಒಳಗಾದ ವ್ಯಕ್ತಿ. ಅಮಾನತು ಆದೇಶ ರದ್ದು ಮಾಡಿ ಪುನರ್ ನೇಮಕಾತಿ ಮಾಡಿಸಿಕೊಡುವುದಾಗಿ ರಿಚ್ಚರ್ಡ್ ವಂಚನೆ ಎಸಗಿದ್ದು, KSRTC MD ಅನ್ಬುಕುಮಾರ್ ಸಹಿಯಾಗಿದೆ. ಹಣ ಕಳುಹಿಸಿಕೊಟ್ರೆ ಆದೇಶ ಪತ್ರ ರವಾನೆ ಮಾಡುತ್ತೇನೆ ಎಂದು ಹೇಳಿ ಯಾಮಾರಿಸಿದ್ದಾನೆ.

ರಿಚ್ಚರ್ಡ್ ಕೆಳಗಿನವರಿಂದ ಮೇಲಿನವರ ಕೈ ಬಿಸಿ ಮಾಡ್ಬೇಕೆಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಕೆಲಸ ಆಯ್ತಲ್ಲಾ ಎಂಬ ಸಮಾಧಾನದಲ್ಲಿ ಗೂಗಲ್ ಪೇನಲ್ಲಿ ನಾಗರಾಜ್ ಕುಗ್ವೆ ಹಣ ರವಾನಿಸಿದ್ದ. ಆ ಬಳಿಕ ಅಂಚೆಯಲ್ಲಿ ಬರಬೇಕಾದ ನೇಮಕಾತಿ ಪತ್ರ ವಾಟ್ಸಪ್​ನಲ್ಲಿ ರಿಚ್ಚರ್ಡ್ ಕಳುಹಿಸಿದ್ದ. ಈ ವೇಳೆ ನಾಗರಾಜ್ ಕುಗ್ವೆ ಅನುಮಾನದಿಂದ ಸಾರಿಗೆ ಸ್ನೇಹಿತರಿಗೆ ತೋರಿಸಿದಾಗ ವಂಚನೆ ಮಾಡಿರುವುದು ಬಯಲಾಗಿದೆ. ನಂತರ ಪೋಸ್ಟ್ ಬಿಟ್ಟು ವಾಟ್ಸಪ್​ನಲ್ಲಿ ಆದೇಶ ಪತ್ರ ಬರಲು ಹೇಗೆ ಸಾಧ್ಯ ಎಂದು ರಿಚ್ಚರ್ಡ್​ನನ್ನು ಪ್ರಶ್ನೆ ಮಾಡಲಾಗಾಗಿತ್ತು. ಆ ಬಳಿಕ ಕೇಂದ್ರ ಕಚೇರಿಯಲ್ಲಿ ಪರಿಶೀಲಿಸಿದಾಗ ರಿಚ್ಚರ್ಡ್ ಅಕ್ರಮ ಬಯಲಾಗಿದೆ. MD ಸಹಿಯನ್ನೇ ನಕಲು ಮಾಡಿ ಹಣ ಪೀಕಿರುವುದು ದೃಢವಾಗಿದೆ.

ಖದೀಮ ರಿಚ್ಚರ್ಡ್​ ಕರ್ಮಕಾಂಡ ಕಂಡು ಹಾಲಿ KSRTC MD ಅಕ್ರಂ ಪಾಷಾ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ಅವರು, ಸೆಕ್ಯೂರಿಟಿ ಮುಖ್ಯಸ್ಥರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಸೆಕ್ಯೂರಿಟಿ ಮುಖ್ಯಸ್ಥರು ತನಿಖೆ ಆರಂಭಿಸಿದ್ದು, ಸಂತ್ರಸ್ತ ನಾಗರಾಜ್ ಕುಗ್ವೆ ಸೆಕ್ಯೂರಿಟಿ ಮುಖ್ಯಸ್ಥರ ಬಳಿ ಘಟನೆಯ ಹೇಳಿಕೆ ವಿವರಣೆ ನೀಡಿದ್ದಾರೆ. ಇನ್ನೂ ಅಕ್ರಮ ಪತ್ತೆಯಾಗುತ್ತಿದ್ದಂತೆ ವಂಚಕ ರಿಚ್ಚರ್ಡ್ ಎಸ್ಕೇಪ್ ಆಗಿದ್ದು ವಂಚಕನ ಪತ್ತೆ ಮಾಡಿ ಕೂಡಲೇ ಕ್ರಮ ಕೈಗೊಳ್ಳುವಂತೆ KSRTC MD ಅಕ್ರಂ ಪಾಷಾ ಅವರು ಸೂಚಿಸಿದ್ದಾರೆ.

You may also like

News

ಬಂಟ್ವಾಳದ ತೌಹೀದ್ ಶಾಲೆಗೆ ಕೀರ್ತಿ ತಂದ ಆಭಿದುನ್ನೀಸ – SSLC ಪರೀಕ್ಷೆಯಲ್ಲಿ ಭರ್ಜರಿ ಸಾಧನೆ

ಇತ್ತೀಚೆಗೆ ಪ್ರಕಟಗೊಂಡ ರಾಜ್ಯ ಮಟ್ಟದ SSLC ಪರೀಕ್ಷಾ ಫಲಿತಾಂಶದಲ್ಲಿ ಬಂಟ್ವಾಳದ ತೌಹೀದ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಭಿದುನ್ನೀಸ ಎಂ. ಅವರು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ
News

ಪಾಲ್ದನೆ ಚರ್ಚ್‌ನಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ – ವೃತ್ತಿ ಮಾರ್ಗದರ್ಶನ ಶಿಬಿರ ಯಶಸ್ವಿ

ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಂತರ ಸರಿಯಾದ ವೃತ್ತಿಜೀವನವನ್ನು ಆರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನ ಶೈಕ್ಷಣಿಕ ಆಯೋಗದ ವತಿಯಿಂದ ಇತ್ತೀಚೆಗೆ

You cannot copy content of this page