May 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆಧಾರ ರಹಿತ ಆರೋಪಗಳ ಮೇಲೆ ಬಂಧಿಸಿದ ಇಬ್ಬರು ಭಗಿನಿಯರನ್ನು ನಿಶ್ಚರ್ತ್ಯವಾಗಿ ಬಿಡುಗಡೆಗೊಳಿಸಲು AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಆಗ್ರಹ

ಜುಲಾಯಿ 26ರಂದು ಶನಿವಾರ ನಾರಾಯಣಪುರ ಜಿಲ್ಲೆಯ 18 ರಿಂದ 19 ವರ್ಷದೊಳಗಿನ ಮೂವರು ಯುವತಿಯರೊಂದಿಗೆ ಇಬ್ಬರು ಸನ್ಯಾಸಿನಿಗಳು ಮತ್ತು ಸುಖ್‌ಮಾನ್ ಮಾಂಡವಿ ಎಂಬ ಯುವಕನನ್ನು ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ರಾಯಪುರ ಧರ್ಮಕ್ಷೇತ್ರದ, ಸನ್ಯಾಸಿನಿಗಳು ಆಗ್ರಾದ ಕಾನ್ವೆಂಟ್‌ಗಳಿಗೆ ಮನೆಕೆಲಸಕ್ಕಾಗಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದರು. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ₹8,000 ರಿಂದ ₹10,000 ರವರೆಗಿನ ಮಾಸಿಕ ವೇತನದೊಂದಿಗೆ ಅಡುಗೆ ಸಹಾಯಕರಾಗಿ ಕೆಲಸ ನೀಡಲಾಗುತ್ತಿತ್ತು. ಅವರ ಪೋಷಕರಿಂದ ಲಿಖಿತ ಒಪ್ಪಿಗೆ ಪಡೆಯಲಾಗಿತ್ತು. ಇದರ ಹೊರತಾಗಿಯೂ, ಛತ್ತೀಸ್‌ಗಢದ ಬಿಜೆಪಿ ನೇತೃತ್ವದ ಸರ್ಕಾರವು ಕಳ್ಳಸಾಗಣೆ ಮತ್ತು ಮತಾಂತರ ಕಾನೂನುಗಳ ಅಡಿಯಲ್ಲಿ ಬಂಧನಗಳು ಸಮರ್ಥನೀಯವೆಂದು ಸಮರ್ಥಿಸುತ್ತದೆ – ಇದನ್ನು ನಾನು ಖಂಡಿಸುತ್ತೇನೆ. ಅವರನ್ನು ಕೂಡಲೇ ನಿಶ್ಚರ್ತ್ಯವಾಗಿ ಬಿಡುಗಡೆಗೊಳಿಸಬೇಕೆಂದು AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರು ತಿಳಿಸಿದ್ದಾರೆ.

“ನಾನು ಈ ಸುಳ್ಳು ಆರೋಪಗಳನ್ನು ಖಡಾಖಂಡಿತವಾಗಿ ನಿರಾಕರಿಸುತ್ತೇನೆ ಮತ್ತು ಅವು ಆಧಾರರಹಿತ ಮತ್ತು ಅರ್ಹತೆಯಿಲ್ಲದವು ಎಂದು ಪ್ರತಿಪಾದಿಸುತ್ತೇನೆ.  ಆರೋಪಿಗಳನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಈ ಆರೋಪಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಮತ್ತು ಅವುಗಳ ಸತ್ಯದ ಕೊರತೆ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಕೂಡಿದ್ದು ಅವನ್ನು ಕೂಡಲೇ ವಜಾಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ.” ಎಂದವರು ಆಗ್ರಹಪೂರಕವಾಗಿ ವಿನಂತಿಸಿದ್ದಾರೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page