ಭಟ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತವಾಗಿ ಸಂಗ್ರಹಿಸಿದ ದೇಣಿಗೆಯ ಸಹಾಯದಿಂದ ಸಿಸಿಟಿವಿ ಅಳವಡಿಕೆ
ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿಯವರ ಸ್ಫೂರ್ತಿದಾಯಕ ಮುಂದಾಳತ್ವ

“ಭದ್ರ ಭಟ್ಕಳ” ಕನಸನ್ನು ಸಾಕಾರಗೊಳಿಸುವತ್ತ ಪ್ರಮುಖ ಹೆಜ್ಜೆ

ಸರ್ಕಾರಿ ಅನುದಾನವಿಲ್ಲದೆ ಕೇವಲ ಸಾರ್ವಜನಿಕರ ಸಹಕಾರದಿಂದಲೇ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳೆ ಗ್ರಾಮದ ಪ್ರಮುಖ ಸ್ಥಳಗಳಲ್ಲಿ 3 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯವನ್ನು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿಯವರು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಕರ್ನಾಟಕ ಗೃಹ ಇಲಾಖೆಯಿಂದ ಯಾವುದೇ ನಿಧಿ ವಿನಿಯೋಗವಾಗದಿದ್ದರೂ, ಜನಸಾಮಾನ್ಯರು ಹಾಗೂ ವ್ಯಾಪಾರಸ್ಥರಿಂದ ಸ್ವಯಂಪ್ರೇರಿತವಾಗಿ ಸಂಗ್ರಹಿಸಿದ ದೇಣಿಗೆಯ ಸಹಾಯದಿಂದ ಈ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಸಮುದಾಯದ ಸಹಭಾಗಿತ್ವದ ಮಾದರಿ ಎನ್ನಬಹುದಾದ ಈ ಪ್ರಯತ್ನದ ಮೂಲಕ ಪೊಲೀಸರು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿದ್ದಾರೆ.


ಪೊಲೀಸ್ ಇಲಾಖೆಯ ಸೇವಾ ಮನೋಭಾವದ ಸ್ಫೂರ್ತಿದಾಯಕ ಉದಾಹರಣೆ :-
ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿಯವರ ನೇತೃತ್ವದಲ್ಲಿ ಮುಖ್ಯ ರಸ್ತೆ, ಬಸ್ ನಿಲ್ದಾಣ, ಬ್ಯಾಂಕ್ಗಳ ಸುತ್ತಮುತ್ತ ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ಉನ್ನತ ದೃಶ್ಯ ಗುಣಮಟ್ಟದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಕಾರ್ಯದಿಂದ ಪೊಲೀಸ್ ಇಲಾಖೆ ತುರ್ತು ಪರಿಸ್ಥಿತಿಯಲ್ಲಿ ಅಥವಾ ಅಪರಾಧ ಸಂಭವಿಸಿದ ಕ್ಷಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತಾಗಿದೆ. ಯಾವುದೇ ಆರ್ಥಿಕ ನೆರವಿಲ್ಲದೆ ಸಮುದಾಯದ ನಂಬಿಕೆಯಿಂದ ಪೂರ್ಣಗೊಂಡಿರುವ ಈ ಯೋಜನೆ, ಪೊಲೀಸ್ ಇಲಾಖೆಯ ಸೇವಾ ಮನೋಭಾವದ ಸ್ಫೂರ್ತಿದಾಯಕ ಉದಾಹರಣೆಯಾಗಿದೆ.

ಸಿಸಿಟಿವಿ ಅಳವಡಿಕೆ ಅಪರಾಧ ನಿಯಂತ್ರಣಕ್ಕೆ ಪರಿಣಾಮಕಾರಿ ಆಯುಧ :
ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯಿಂದಾಗಿ ಭಟ್ಕಳ ವ್ಯಾಪ್ತಿಯಲ್ಲಿ ವಾಹನ ಕಳ್ಳತನ, ಮನೆ ಕಳ್ಳತನ, ಬ್ಯಾಂಕ್ ದರೋಡೆ ಮುಂತಾದ ಅಪರಾಧಗಳು ನಿಯಂತ್ರಣಕ್ಕೆ ಬರಲಾರಂಭಿಸಿವೆ. ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸುವ ಮೂಲಕ ಪೊಲೀಸರು ಶಂಕಿತ ವ್ಯಕ್ತಿಗಳನ್ನು ಬೇಗ ಗುರುತಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿದೆ. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿದೆಯೆಂಬ ಭಾವನೆ ಜನರಲ್ಲಿ ಮೂಡಿದೆ.

ಅಪರಾಧಗಳು ನಡೆಯುವ ಮೊದಲು ತಡೆಗಟ್ಟುವ ಕ್ರಮವಾಗಿ ಸಿಸಿಟಿವಿಗಳು ಮಹತ್ವದ ಪಾತ್ರ ವಹಿಸುತ್ತಿವೆ. ಕಳ್ಳತನ ಅಥವಾ ಹಲ್ಲೆ ಪ್ರಯತ್ನಗಳಾದರೆ, ಕ್ಯಾಮರಾದ ದೃಶ್ಯದಿಂದ ಪೊಲೀಸರು ಘಟನೆಗೆ ಸ್ಪಷ್ಟ ದಾಖಲೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ತನಿಖಾ ಪ್ರಕ್ರಿಯೆ ವೇಗವಾಗಿ ಮುಂದುವರಿಯುತ್ತದೆ ಮತ್ತು ಅಪರಾಧಿಗಳಿಗೆ ಶಿಕ್ಷೆ ದೊರಕುವಲ್ಲಿ ವಿಳಂಬವಾಗುವುದಿಲ್ಲ.

ಇದೇ ವೇಳೆ ಸಿಸಿಟಿವಿ ಅಳವಡಿಕೆಯಿಂದ ಸಾರ್ವಜನಿಕರು ತಮ್ಮ ವ್ಯಾಪಾರಸ್ಥಳಗಳು ಮತ್ತು ಮನೆಗಳಲ್ಲಿ ಸಹ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಪ್ರೇರಣೆಯಾಗಿದ್ದಾರೆ. ಪೊಲೀಸ್ ಇಲಾಖೆ ಹಾಗೂ ನಾಗರಿಕರ ನಡುವೆ ಉಂಟಾದ ಈ ಬಾಂಧವ್ಯ, “ಭದ್ರ ಭಟ್ಕಳ” ಕನಸನ್ನು ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.




