July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ವಾಗಾಂಚೊ ಖೇಲ್” – ಫೆಬ್ರವರಿ 14ರಂದು ಪ್ರೇಮಿಗಳ ದಿನದ ಉಡುಗೊರೆಯಾಗಿ ಚೊಚ್ಚಲ ಹಾಡು ಬಿಡುಗಡೆ

ಮಂಗಳೂರು: ಸನ್ ಶೈನ್ ಕ್ರಿಯೇಷನ್ ನಿರ್ಮಾಣದ ಅಡಿಯಲ್ಲಿ ಸಿದ್ಧವಾಗಿರುವ ನೂತನ ಕೊಂಕಣಿ ಚಲನಚಿತ್ರ “ವಾಗಾಂಚೊ ಖೇಲ್” (VAGANSO KHEL) ಚಿತ್ರದ ಮೊದಲ ಹಾಡು ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ.

ಪ್ರವೀಣ್ ಫೆರ್ನಾಂಡಿಸ್ ನಿರ್ಮಾಣ ಹಾಗೂ ಅರ್ವಿನ್ ಲೋಬೋ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಕರಾವಳಿಯ ಹೆಮ್ಮೆಯ ಸಂಸ್ಕೃತಿಯಾದ ‘ಹುಲಿ ವೇಷ’ ಆಧಾರಿತ ಕಥೆಯನ್ನು ಹೊಂದಿದೆ. ಕರಾವಳಿಯ ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಚಿತ್ರದಲ್ಲಿ ಕೊಂಕಣಿ ಸೇರಿದಂತೆ ತುಳು, ಬ್ಯಾರಿ ಮತ್ತು ಕನ್ನಡ ಭಾಷೆಗಳನ್ನು ಬಳಸಲಾಗಿದೆ.

ಫೆಬ್ರವರಿ 14ಕ್ಕೆ ‘ಮೋಗ್ ಜಾಲಾ’ ಹಾಡಿನ ಲೋಕಾರ್ಪಣೆ :

ಚಿತ್ರದ ಬಹುನಿರೀಕ್ಷಿತ ಮೊದಲ ಹಾಡು “ಮೋಗ್ ಜಾಲಾ” (MOG ZALA) ಪ್ರೇಮಿಗಳ ದಿನದಂದು (ಫೆಬ್ರವರಿ 14) ಸನ್ ಶೈನ್ ಕ್ರಿಯೇಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿಗೆ ಡೋಲ್ವಿನ್ ಕೊಲಲಗಿರಿ ಅವರು ಸಂಗೀತ ನೀಡಿದ್ದು, ಪ್ರವೀಣ್ ಫೆರ್ನಾಂಡಿಸ್ ಸಾಹಿತ್ಯ ಬರೆದಿದ್ದಾರೆ. ಪ್ರಜ್ವಲ್ ಡೇಸಾ ಮತ್ತು ಜಾಸ್ಮಿನ್ ಡಿಸೋಜ ಈ ಹಾಡಿಗೆ ಧ್ವನಿಯಾಗಿದ್ದಾರೆ.

ಮೇ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ:

ಈ ಬಹುಭಾಷಾ ಸೊಗಡಿನ ಚಿತ್ರವು ಮೇ 1ರಂದು ತುಳುನಾಡಿನಾದ್ಯಂತ ತೆರೆಕಾಣಲಿದೆ. ಅದಕ್ಕೂ ಮುನ್ನ ಏಪ್ರಿಲ್ 17ರಿಂದ ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗಲಿದ್ದು, ಇದರ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ತಾರಾಗಣ ಮತ್ತು ತಾಂತ್ರಿಕ ವರ್ಗ:

* ನಟರು: ಡೋಲ್ಲಾ ಮಂಗಳೂರು, ಆಡ್ರಿನ್ ಡಿಕುನ್ನಾ, ಕ್ಲಿಯೋನ ಡಿಸೋಜ, ವಿಯೋಲ ಡಿಸೋಜ, ಅನೂಪ್ ಹ್ಯಾರಿಕ್, ಜೆರೋಮ್ ಮೊರಾಸ್, ನಾರ್ಬರ್ಟ್ ಜಾನ್, ಪ್ರಶಾಂತ್ C.K., ಫ್ರಾನ್ಸಿಸ್ ಪ್ರೀತಮ್, ರೈಸನ್ ಮತ್ತು ಇತರರು.

* ತಾಂತ್ರಿಕ ತಂಡ: ಅರ್ವಿನ್ ಲೋಬೋ (ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಂಕಲನ), ಡೇನಿಯಲ್ ಜೈಸನ್ (ಛಾಯಾಗ್ರಹಣ), ಡೋಲ್ವಿನ್ ಕೊಳಲಗಿರಿ (ಸಂಗೀತ).

* ನಿರ್ಮಾಣ ಸಹಕಾರ: ಸೀಮಾ ಫೆರ್ನಾಂಡಿಸ್ (ಸಹ-ನಿರ್ಮಾಣ), ನಾರ್ಬರ್ಟ್ ಜಾನ್ (ಸಹ-ನಿರ್ದೇಶನ ಮತ್ತು ವ್ಯವಸ್ಥಾಪಕರು), ಪವನ್ ಆಚಾರ್ಯ ಬೋಳೂರು (ಪ್ರಚಾರ ಕಲೆ).

ಕರಾವಳಿಯ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಈ ವಿಶೇಷ ಪ್ರಯತ್ನಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ನಿರ್ಮಾಣ ಸಂಸ್ಥೆ ವಿನಂತಿಸಿದೆ.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page