ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಅನುದಾನ
ಮಳೆ ಹಾನಿ ಕಾಮಗಾರಿಗಳಿಗೆ MLC ಐವನ್ ಡಿಸೋಜ ಚಾಲನೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ 10 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ MLC ಐವನ್ ಡಿಸೋಜ ತಿಳಿಸಿದ್ದಾರೆ.




ಈ ಅನುದಾನದಡಿ ಸುಮಾರು 18 ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆಗಾಲ ಆರಂಭವಾಗುವ ಮೊದಲೇ ಈ ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.




ಪ್ರಮುಖ ಕಾಮಗಾರಿಗಳು:
* ಕದ್ರಿ ಉತ್ತರ (ವಾರ್ಡ್ 32): ಸರ್ಕ್ಯೂಟ್ ಹೌಸ್ ಬಳಿಯ ರಕ್ಷಣಾ ಗೋಡೆ ನಿರ್ಮಾಣಕ್ಕೆ 1.90 ಕೋಟಿ ರೂಪಾಯಿ
* ಮಂಗಳೂರು ಕೋರ್ಟ್ ವಾರ್ಡ್ (ವಾರ್ಡ್ 40): ಸಿಟಿ ಆಸ್ಪತ್ರೆ ಎದುರು ರಾಜಕಾಲುವೆ ನಿರ್ಮಾಣಕ್ಕೆ 30 ಲಕ್ಷ ರೂ ರೂಪಾಯಿ
* ಬೆಂದೂರ್ ವೆಲ್ (ವಾರ್ಡ್ 38): ಗೀತಾಂಜಲಿ ಎದುರು ತಡೆಗೋಡೆ ಅಭಿವೃದ್ಧಿಗೆ 30 ಲಕ್ಷ ರೂಪಾಯಿ
* ಇತರ ಪ್ರದೇಶಗಳು: ಅನೆಗುಂಡಿ ಆಶ್ರಯ ಬಡಾವಣೆ, ನಂದಗೋಕುಲ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ಹಾಗೂ ಬಲ್ಲಾಳ್ ಬಾಗ್ ಶರಾವತಿ ಅಪಾರ್ಟ್ಮೆಂಟ್ ಬಳಿ ತಡೆಗೋಡೆ ನಿರ್ಮಾಣ.

ಇದಲ್ಲದೆ, ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೂಳು ಎತ್ತುವ (Dredging) ಕಾಮಗಾರಿಗಾಗಿ ಪ್ರತ್ಯೇಕವಾಗಿ 3.50 ಕೋಟಿ ರೂಪಾಯಿ ಮಂಜೂರಾಗಿದೆ. ನಗರದ ಒಳಚರಂಡಿ ಮತ್ತು ರಾಜಕಾಲುವೆಗಳ ಶಾಶ್ವತ ಅಭಿವೃದ್ಧಿಗಾಗಿ ಸುಮಾರು 1250 ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಜಾರಿಗೆ ತರಲು ಸರ್ಕಾರದ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಐವನ್ ಡಿಸೋಜ ತಿಳಿಸಿದರು.


ಪರಿಶೀಲನಾ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್ಗಳಾದ ನವೀನ್ ಡಿಸೋಜ, ಲ್ಯಾನ್ಸಿಲೋಟ್ ಪಿಂಟೋ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಪಾಲಿಕೆ ಎಂಜಿನಿಯರ್ಗಳು ಉಪಸ್ಥಿತರಿದ್ದರು.




