May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಿ.ಎ. ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಪಿ.ಯು. ಕ್ಯಾಂಪಸ್ ಕ್ರೋಮ ಮತ್ತು ಡಯೆಟೆಕ್ 6.0

ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಏಕದಿನ ಅಂತರ್ ಪಿ.ಯು. ಕಾಲೇಜು ಸ್ಪರ್ಧೆ ಕ್ಯಾಂಪಸ್ ಕ್ರೋಮ ನವೆಂಬರ್ 11ರಂದು ಪಿ.ಎ. ಕ್ಯಾಂಪಸ್ ನಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಸಿ.ಸಿ.ಐ. ಅಧ್ಯಕ್ಷರಾದ ಆನಂದ್ ಜಿ.ಪೈ. ‘ಇಂದಿನ ಈ ಸ್ಪರ್ಧೆ ಗೆಲುವಿಗಿಂತಲೂ ಅನುಭವಕ್ಕೆ ಹೆಚ್ಚು ಒತ್ತನ್ನು ನೀಡಲಿ. ಸೋಲು ಗೆಲುವು ಇದ್ದದ್ದೆ ಆದರೆ ಅನುಭವ ಅದಕ್ಕಿಂತಲೂ ಮಿಗಿಲು’ ಎಂದರು.

ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಜ್ ಜೆ. ಹಾಸಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕೆ.ಸಿ.ಸಿ.ಐ. ಕಾರ್ಯ ನಿರ್ವಾಹಕ ಮುಖ್ಯಸ್ಥ ಮೈತ್ರೇಯ ಎ., ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ. ಹರಿಕೃಷ್ಣಣ್ ಜಿ., ಪಿ.ಎ.ಇ.ಟಿ ಯ ಎ.ಜಿ.ಎಂ. ಶರಫುದ್ದೀನ್ ಪಿ.ಕೆ., ಎ.ಇ.ಟಿ.ಯ ವಿದ್ಯಾರ್ಥಿ ಡೀನ್ ಡಾ. ಸಯ್ಯಿದ್ ಅಮೀನ್ ಅಹ್ಮದ್, ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್, ಪಿ.ಎ. ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಖಾನ್, ಕ್ಯಾಂಪಸ್ ವ್ಯವಸ್ಥಾಪಕರ ಡಾ. ಇಕ್ಬಾಲ್, ಐ.ಕ್ಯೂ.ಎ.ಸಿ. ಯ ಮುಖ್ಯಸ್ಥೆ ವಾಣಿಶ್ರೀ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಆಶಾಲತಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ್, ಮಾನವಿಕ ವಿಭಾಗದ ಮುಖ್ಯಸ್ಥೆ ನೂರ್ ಜಹಾನ್ ಬೇಗಂ, ಪಿ.ಎ.ಇ.ಟಿ. ದಾಖಲಾತಿ ನಿರ್ವಹಣಾಧಿಕಾರಿ ಶಫಿನಾಝ್, ಕಾಲೇಜ್ ನ ಖರೀದಿ ವಿಭಾಗದ ನಿರ್ದೇಶಕ ಹಾರಿಸ್ ಟಿ.ಡಿ. ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮುಹಮ್ಮದ್ ಸಂಶೀರ್ ಕೆ.ಎಸ್., ಲವೀನ ಡಿಸೋಜ ಮತ್ತು ಸಜೀರ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿನಿ ಹಿಬಾ ಮರ್ಯಂ ಮತ್ತು ಮುಹಮ್ಮದ್ ಫರ್ಹಾನ್ ಕಾರ್ಯಕ್ರಮ ನಿರೂಪಿಸಿದರೆ ಹೈಫ್ನಾ ಸ್ವಾಗತಿಸಿ ಶಾಝಿಮ ವಂದಿಸಿದರು ಮತ್ತು ಸಾಹಿಲ್ ಪ್ರಾರ್ಥನೆ ನೆರವೇರಿಸಿದರು.

ಇದಾದ ನಂತರದಲ್ಲಿ ಆಹಾರ ಮೇಳ ಡಯೆಟಕ್ 6.0 ಅಥಿತಿಗಳಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ವಿವಿಧ ರೀತಿಯ ಆಹಾರ ಪ್ರದರ್ಶನ ಎಲ್ಲರ ಗಮನವನ್ನು ಸೆಳೆಯಿತಲ್ಲದೆ ಹೋಮ್ ಬೇಕರ್ ಗಳ ಆಹಾರ ಪ್ರದರ್ಶನ ಇನ್ನಷ್ಟು ಆಕರ್ಷಣೆಯ ಬಿಂದುಗಳಾಗಿದ್ದವು. ಅತ್ಯುತ್ತಮ ಸ್ಟಾಲ್ ಪ್ರಶಸ್ತಿಯೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.

ಸಂಜೆ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರನ್ನು ಅಥಿತಿಗಳು ಸನ್ಮಾನಿಸಿದರು. ಸ್ಪರ್ಧೆಯ ಭಾಗವಾಗಿ ವಿವಿಧ ವಿಭಾಗಗಳಿಂದ 10 ಕ್ಕೂ ಅಧಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು 15 ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸದರು. ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ.

ಟೆಕ್ಟೋನಿಕ್ 2.0ರ ಭಾಗವಾಗಿ ಬ್ರೈನ್ ಬ್ಲಾಸ್ಟ್ ಐಟಿ ಕ್ವಿಝ್ ನಲ್ಲಿ ಪ್ರಥಮ ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜ್ ಮತ್ತು ದ್ವಿತೀಯ ಹಿರಾ ವಿಮೆನ್ಸ್ ಪಿ.ಯು. ಕಾಲೇಜ್, ಪೋಸ್ಟರ್ ಕ್ವಿಸ್ಟ್ ಅಲ್ಲಿ ಪ್ರಥಮ ಕೆ. ಪಾಂಡ್ಯರಾಜ ಬಲ್ಲಾಲ್ ಪಿ.ಯು. ಕಾಲೇಜ್ ಮತ್ತು ದ್ವಿತೀಯ ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜ್, ಹ್ಯೂಮನಿಸ್ಟ್ 2.0ರ ಭಾಗವಾಗಿ ಟ್ರಾಂಕ್ಯುಲ್ ಫ್ಲಾಶ್ ನಲ್ಲಿ ಪ್ರಥಮ ಕನಚೂರ್ ಪಿ.ಯು. ಕಾಲೇಜ್ ಮತ್ತು ದ್ವಿತೀಯ ಕುನಿಲ್ ಪಿ.ಯು. ಕಾಲೇಜ್, ಕ್ರೋಮ ರೀಲ್ಸ್ ಅಲ್ಲಿ ಪ್ರಥಮ ವಿಶ್ವಮಂಗಳ ಪಿ.ಯು. ಕಾಲೇಜ್ ಮತ್ತು ದ್ವಿತೀಯ ಹಿರಾ ವುಮೆನ್ಸ್ ಪಿ.ಯು. ಕಾಲೇಜ್, ಡಯಟೆಕ್ 6.0 ರ ಭಾಗವಾಗಿ ಫ್ರೂಟ್ ಆರ್ಟ್ ಗ್ಯಾಲರಿಯಲ್ಲಿ ಪ್ರಥಮ ಹಿರಾ ವುಮೆನ್ಸ್ ಪಿ.ಯು. ಕಾಲೇಜ್ ಹಾಗೂ ದ್ವಿತೀಯ ವಿಶ್ವಮಂಗಳ ಪಿ.ಯು. ಕಾಲೇಜ್, ಕುಕಿಂಗ್ ಕಂಫೇಶನ್ಸ್ ಅಲ್ಲಿ ಪ್ರಥಮ ಸೈಂಟ್ ಅಲೋಶಿಯಸ್ ಪ.ಯು. ಕಾಲೇಜ್ ಹಾಗೂ ದ್ವಿತೀಯ ಹಿರಾ ವುಮೆನ್ಸ್ ಪಿ.ಯು. ಕಾಲೇಜ್, ಟೇಸ್ಟೀ ಟಾಸ್ಕ್ ಅಲ್ಲಿ ಪ್ರಥಮ ಕಣಚೂರ್ ಪಿ.ಯು. ಕಾಲೇಜ್ ಮತ್ತು ದ್ವಿತೀಯ ಕೆ. ಪಾಂಡ್ಯರಾಜ ಬಲ್ಲಾಲ್ ಪಿ.ಯು. ಕಾಲೇಜ್, ಕಾಮಿಯೋ 2.0 ಭಾಗವಾಗಿ ಮಿಸ್ಟರಿ ಟ್ರೈಲ್ಸ್ ಅಲ್ಲಿ ಪ್ರಥಮ ಜಿ.ಎಚ್.ಎಸ್.ಎಸ್. ಪಿ.ಯು. ಕಾಲೇಜ್ ಉಡ್ಮಾ ಮತ್ತು ದ್ವಿತೀಯ ಮಾಪ್ಸ್ ಪಿ.ಯು. ಕಾಲೇಜ್, ದಿ ಕ್ರಿಯೇಟಿವ್ ಬ್ರೈನ್ ಅಲ್ಲಿ ಪ್ರಥಮ ಮತ್ತು ದ್ವಿತೀಯ ಎರಡನ್ನು ಕಣಚೂರ್ ಪಿ.ಯು. ಕಾಲೇಜ್ ತಮ್ಮದಾಗಿಸಿಕೊಂಡಿತು.

ಸ್ಪಾರ್ಟನ್ (ಬೆಸ್ಟ್ ಮ್ಯಾನೆಜರ್) ಅಲ್ಲಿ ಕಣಚೂರು ಅತ್ಯುತ್ತಮವಾಗಿ ಹೊರಹೊಮ್ಮಿತು. ಎಲ್ಲಾ ಸ್ಪರ್ಧೆಯ ಚಾಂಪಿಯನ್ ಆಗಿ ಕಣಚೂರ್ ಪಿ.ಯು. ಕಾಲೇಜ್ ಹೊರಹೊಮ್ಮಿದರೆ ರನ್ನರ್ ಆಗಿ ಹಿರಾ ವುಮೆನ್ಸ್ ಪಿ.ಯು. ಕಾಲೇಜ್ ತನ್ನ ಮುಡಿಗೇರಿಸಿಕೊಂಡಿತು.

You may also like

News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು
News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC

You cannot copy content of this page