ಕಿನ್ನಿಗೋಳಿ – ಪದ್ಮನ್ನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯವರಿಗೆ ಐಕ್ಯ ವೇದಿಕೆ ಕೊಡಾಜೆ ವತಿಯಿಂದ ಅಭಿನಂದನೆ
![](https://karavalisuddi.com/wp-content/uploads/2024/09/kodaje-2.webp)
ಕಿನ್ನಿಗೋಳಿ ಸಪ್ಟಂಬರ್ 28 : ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆಯ ‘ಐಕ್ಯ ವೇದಿಕೆ ಕೊಡಾಜೆ’ ಇದರ ವತಿಯಿಂದ ಐಕ್ಯ-ಭಾವೈಕ್ಯತೆಯನ್ನು ಮೈಗೂಡಿಸಿಕೊಂಡು ಸರ್ವ ಧರ್ಮೀಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುತ್ತಿರುವ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ, ಪದ್ಮನ್ನೂರು – ಕಿನ್ನಿಗೋಳಿ ಇದರ ಅದ್ಯಕ್ಷರು ಹಾಗೂ ಸರ್ವ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮವು ಭಾನುವಾರ ಸಪ್ಟಂಬರ್ 29 ಸಂಜೆ ಸಂಜೆ 5.30ಕ್ಕೆ ಪದ್ಮನ್ನೂರಿನ ಸಾರ್ವಜನಿಕ ಯಕ್ಷಗಾನ ಬಯಲಾಟ ಸುವರ್ಣ ಮಹೋತ್ಸವ ಸಭಾ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ದೇವಸ್ಥಾನದ ಅರ್ಚಕರು, ಮಸೀದಿ ಖತೀಬರು ಹಾಗೂ ಚರ್ಚ್ ನ ಧರ್ಮಗುರುಗಳಿಗೆ ಗೌರವಾರ್ಪಣೆ, ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷರಿಗೆ ಸನ್ಮಾನ, ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ ಎಂದು ಐಕ್ಯ ವೇದಿಕೆ ಕೊಡಾಜೆ ಇವರ ಪ್ರಕಟಣೆ ತಿಳಿಸಿದೆ.