February 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಎಪಿಸ್ಕೊಪಲ್ ಸಿಟಿ ವಲಯದ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇವರಿಗೆ ಸನ್ಮಾನ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಎಪಿಸ್ಕೊಪಲ್ ಸಿಟಿ ವಲಯದ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಭಾನುವಾರ ಮಂಗಳೂರು ಹಂಪನ್ ಕಟ್ಟಾದಲ್ಲಿರುವ ಎಂ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಎಪಿಸ್ಕೊಪಲ್ ಸಿಟಿ ವಲಯದ ಅಧ್ಯಕ್ಷೆ ಐಡಾ ಫುರ್ಟಾಡೊ ವಹಿಸಿದ್ದರು. ಮಿಲಾಗ್ರಿಸ್ ಚರ್ಚ್ ನ ಹಾಗೂ ಸಿಟಿ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಬೊನಂವೆಂಚರ್ ನಜ್ರೆತ್ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಜೋನ್ ವಾಸ್ ಇವರು ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯಕ್ರಮ ಆಯೋಜಿಸಿದ ಉದ್ದೇಶ ಹಾಗೂ ವಿಧಾನ ಪರಿಷದ್ ಸದಸ್ಯ ಐವನ್ ಡಿಸೋಜ ನಡೆದು ಬಂದ ಹಾದಿಯನ್ನು ವಿವರಿಸಿದರು.

ಕಾರ್ಯಕ್ರಮದ ಸಂಚಾಲಕ ಜೋನ್ ಮೊಂತೇರೊ ಎಂ.ಎಲ್.ಸಿ. ಐವನ್ ಡಿಸೋಜಾ ಇವರನ್ನು ಸಭೆಗೆ ಪರಿಚಯಿಸಿದರು. ರೊಜಾರಿಯೊ ಘಟಕದ ಅಧ್ಯಕ್ಷ ಫಿಲಿಪ್ ಪಿರೇರಾ ಸನ್ಮಾನ ಪತ್ರವನ್ನು ವಾಚಿಸಿ, ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಎಂ.ಎಲ್.ಸಿ. ಐವನ್ ಡಿಸೋಜಾ ಇವರನ್ನು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಐವನ್ ಡಿಸೋಜ ಸಭೆಯನ್ನು ಉದ್ದೇಶಿಸಿ ಮಾತನಾಡಿ ರಾಜಕೀಯ ಕ್ಷೇತ್ರ ಸಹಜವಾಗಿ ಸಲೀಸಾದದು ಅಲ್ಲ. ಆ ಹಾದಿಯಲ್ಲಿ ನಡೆಯಲು ಜನರೊಂದಿಗೆ ನಡೆದು ಜನರ ಅಹವಾಲುಗಳಿಗೆ ಕಿವಿಗೊಟ್ಟು ಅವರ ಸಮಸ್ಯೆಗಳ ಪರಿಹಾರಕ್ಕೆ ಶೃಮಿಸುವ ಮನೋಭಾವ ಬೆಳೆಸಿದರೆ ಮಾತ್ರ ರಾಜಿಕೀಯ ಕ್ಷೇತ್ರದಲ್ಲಿ ಮಹತ್ತರ ಕಾರ್ಯಗಳನ್ನು, ತಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಲ್ಲದೆ ಸರ್ವರಿಗೂ ಸಹಕಾರಿಯಾಗುವ ಕಾರ್ಯಗಳನ್ನು ಮತ್ತು ಯೋಜನೆಗಳನ್ನು ಅನುಷ್ಟಾನ ಮಾಡಲು ಸಾಧ್ಯ. ತಮ್ಮ ಸಮುದಾಯವನ್ನು ಪ್ರತಿನಿಧಿಸುವ ಎಕೈಕ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವ ಸೌಭಾಗ್ಯವೂ ನನ್ನದಾಗಿದೆ ಎಂದು ಸಂತೋಷ ವ್ಯಕ್ತ ಪಡಿಸಿದ ಅವರು ಮಂಗಳೂರಿನ ಜನಪ್ರತಿನಿಧಿಗಳಿಗೆ ಒಂದು ವಿಶೇಷ ಸ್ಥಾನ ಮಾನ ರಾಜ್ಯ ಹಾಗೂ ಕೇಂದ್ರ ಸರಕಾರದಲ್ಲಿ ಇದೆ. ಏಕೆಂದರೆ ನಾವು ಮಂಗಳೂರಿನವರು ವಿದ್ಯಾವಂತರು, ಸಮರ್ಥರು ಹಾಗೂ ಸದಾ ಕಾರ್ಯೋನ್ಮುಕರು. ಅದುದರಿಂದ ರಾಜಕೀಯವನ್ನು ಕಡೆಗಣಿಸುವ ಕ್ಷಣಗಳು ಇಂದು ಇಲ್ಲ. ಎಲ್ಲಾ ಕ್ಷೇತ್ರಗಳಂತೆ ರಾಜಕೀಯವನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ತೆಗೆದು ಪ್ರಮುಖವಾಗಿ ನಮ್ಮ ಸಮುದಾಯದಿಂದ ರಾಜಿಕೀಯವನ್ನು ಸೇರುವ ಮನೋಭಾವನೆ ವೃದ್ಧಿಯಾಗಲಿ ಎಂಬ ಸಂದೇಶವನ್ನು ನೀಡಿ ತಮಗೆ ಸನ್ಮಾನ ಕಾರ್ಯವನ್ನು ಹಮ್ಮಿಕೊಂಡು ಸನ್ಮಾನಿಸಿದ ಕಥೊಲಿಕ್ ಸಭಾ ಎಪಿಸ್ಕೊಪಲ್ ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕ, ಅಧ್ಯಕ್ಷ ಹಾಗೂ ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.

ಮಿಲಾಗ್ರಿಸ್ ಚರ್ಚ್ ನ ಹಾಗೂ ಸಿಟಿ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಬೊನಂವೆಂಚರ್ ನಜ್ರೆತ್, ಎಪಿಸ್ಕೊಪಲ್ ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಜೋನ್ ವಾಸ್, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ಸಿಟಿ ವಲಯ ಕಾರ್ಯದರ್ಶಿ ರೋಹನ್ ಸಿಕ್ವೇರಾ, ಕಾರ್ಯಕ್ರಮದ ಸಂಚಾಲಕ ರಚನಾ ಸಂಘಟನಾ ಅಧ್ಯಕ್ಷ ಜೋನ್ ಮೊಂತೇರೊ ಹಾಗೂ ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಲ್ಯಾನ್ಸಿ ಲಸ್ರಾದೊ ಸಹ ಸಂಚಾಲಕರಾಗಿ ಸಹಕರಿಸಿದರು. ಸಂಘಟನೆಯ ಕಾರ್ಯದರ್ಶಿ ರೋಹನ್ ಎಲ್. ಸಿಕ್ವೇರಾ ಧನ್ಯವಾದವಿತ್ತರು. ಕಿಶೋರ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

 

You may also like

News

 ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
News

CELEBRATION OF THE FEAST OF OUR LADY OF LOURDES at Lourdes central School, Bejai, Mangalore

“Let us run to Mary and as her little children cast ourselves into her arms with a perfect confidence.”  —St.

You cannot copy content of this page