April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ವಿಭಜಕ ತಡೆಬೇಲಿ ಹೆಚ್ಚುತ್ತಿರುವ ಅಪಘಾತಗಳು

ಅವೈಜ್ಞಾನಿಕ ರಸ್ತೆಯನ್ನು ವೈಜ್ಞಾನಿಕ ಎಂದು ಬ್ಯಾನರ್ ಹಾಕಿ ಬಿಂಬಿಸುವ ಪಂಚಾಯತ್ ಸದಸ್ಯ ಎಲ್ಲಿ ಎಂದು ಕೇಳುವ ಗ್ರಾಮಸ್ಥರು

ಮಾಣಿ ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಭಾಗವಾಗಿ ಹೆದ್ದಾರಿಗೆ ನಿರ್ಮಿಸಿದ ರಸ್ತೆ ವಿಭಜಕ ಕಬ್ಬಿಣದ ತಡೆಬೇಲಿಯು ಅವೈಜ್ಞಾನಿಕವಾಗಿದ್ದು ರಾತ್ರಿ ವೇಳೆ ಇದು ಚಾಲಕರಿಗೆ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಇರುವುದರಿಂದ ನಿರ್ಮಿಸಿದ ದಿನದಿಂದ ಇದುವರೆಗೆ ಅಪಘಾತಗಳು ಹೆಚ್ಚೆಚ್ಚು ಸಂಭವಿಸಿದೆ. ಇಂದು ಮಾರ್ಚ್ 20ರಂದು ಗುರುವಾರ ಬೆಳಗ್ಗಿನ ಜಾವ ಮಂಗಳೂರು ಕಡೆಯಿಂದ ಬಂದ ಟ್ಯಾಂಕರೊಂದು ರಸ್ತೆ ವಿಭಜಕ ತಡೆಬೇಲಿಯನ್ನು ಸೀಳಿಕೊಂಡು ಹೋಗಿ ಹೆದ್ದಾರಿಯಲ್ಲಿ ಅಡ್ಡ ನಿಂತಿದ್ದು ಸರ್ವಿಸ್ ರಸ್ತೆಯ ಮೂಲಕ ವಾಹನಗಳು ತೆರಳಲು ವ್ಯವಸ್ಥೆ ಇದ್ದುದರಿಂದ ಯಾವುದೇ ರಸ್ತೆ ತಡೆ ಉಂಟಾಗಿರಲಿಲ್ಲ.

ಈ ಪ್ರದೇಶದಲ್ಲಿ ಹಲವಾರು ಅಪಘಾತಗಳು ಈ ತಡೆಬೇಲಿಗೆ ಸಂಭವಿಸಿರುವುದರಿಂದ ಇದೊಂದು ಅವೈಜ್ಞಾನಿಕ ರಸ್ತೆ ವಿಭಜಕ ವಾಗಿರುವುದರಿಂದಲೂ ಪರ್ಯಾಯ ವ್ಯವಸ್ಥೆ ಮಾಡಬೇಕಾದದ್ದು ಹೆದ್ದಾರಿ ಇಲಾಖೆಯ ಕರ್ತವ್ಯವಾಗಿದೆ. ಮುಂದೆ ನಡೆಯುವ ಅಪಘಾತಗಳಲ್ಲಿ ಪ್ರಾಣಹಾನಿ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡರೆ ಒಳಿತು ಎಂದು ನಾಗರಿಕರು ಅಭಿಪ್ರಾಯ ಪಡುತ್ತಿದ್ದರು.

ವಿಪರ್ಯಾಸವೆಂದರೆ, ಖಾಸಗಿ ಕಾಂಕ್ರೀಟ್ ರಸ್ತೆಯನ್ನು ಅವೈಜ್ಞಾನಿಕ ಎಂದು ಬಿಂಬಿಸಿ ನಾನು ಚರಂಡಿಯನ್ನು ನಿರ್ಮಿಸಿ ವೈಜ್ಞಾನಿಕ ಕಾಂಕ್ರೀಟ್ ರಸ್ತೆ ಮಾಡಿದ್ದೇನೆ ಎಂದು ತನ್ನ ಭಾವಚಿತ್ರವಿರುವ ಬ್ಯಾನರನ್ನು ಸತ್ತ ಬಾವಲಿ ವಿದ್ಯುತ್ ತಂತಿಯಲ್ಲಿ ನೇತಾಡುವ ಹಾಗೆ ತಾನೇ ನೇತಾಡಿಸಿ ಹೆಸರು ಗಿಟ್ಟಿಸಿಕೊಳ್ಳುವ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಅಪಘಾತಗಳು ನಡೆಯುವ ಸಂದರ್ಭದಲ್ಲಿ ಎಲ್ಲಿ ಕಾಣೆಯಾಗಿದ್ದಾನೆ? ಸರ್ಕಾರಿ ಜಾಗದಲ್ಲಿ ಬಾಯಮ್ಮನ ಐಶಾರಾಮಿ ಬಂಗಲೆಯನ್ನು ನಿರ್ಮಿಸಲು ಹೋಗಿದ್ದಾನೆಯೇ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page