April 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ವಶ

ಭಟ್ಕಳ ಗ್ರಾಮೀಣ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯಿದೆ-2020, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ-1960 ಹಾಗೂ ಬಿ.ಎನ್.ಎಸ್. ಕಲಂ ಅಡಿಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು ಜಾನುವಾರುಗಳ ಅಕ್ರಮ ಸಾಗಾಣಿಕೆಯನ್ನು ಪತ್ತೆಹಚ್ಚಿದ್ದಾರೆ.

ಸೆಪ್ಟೆಂಬರ್ 5 ರಂದು ಶುಕ್ರವಾರ ಬೆಳಗಿನ ಸುಮಾರು 6.30 ಗಂಟೆಯ ಸಮಯದಲ್ಲಿ ಭಟ್ಕಳ ತಾಲೂಕಿನ ಹನೀಫಾಬಾದ್‌ ಎನ್‌.ಎಚ್. 66 ರಸ್ತೆಯ ಪಿ.ಬಿ. ಇಬ್ರಾಹಿಂ ಪೆಟ್ರೋಲ್ ಬಂಕ್ ಎದುರು, ಅಶೋಕ್ ಲೈಲೆಂಡ್ ಕಂಟೇನರ್ (ನಂ. ಟಿ.ಎಸ್.-12/ಯು.ಸಿ 6464)ನಲ್ಲಿ ಸುಮಾರು ₹7 ಲಕ್ಷ ಮೌಲ್ಯದ 10 ಜಾನುವಾರುಗಳನ್ನು ಕಟ್ಟಿಹಾಕಿ, ನೀರು-ಹುಲ್ಲು ನೀಡದೆ, ವಧೆ ಮಾಡುವ ಉದ್ದೇಶದಿಂದ ಪರವಾನಿಗೆಯಿಲ್ಲದೆ ಸಾಗಿಸುತ್ತಿರುವ ವೇಳೆ ಪೊಲೀಸರು ದಾಳಿ ನಡೆಸಿದರು.

ವಶಪಡಿಸಿಕೊಂಡ ವಸ್ತುಗಳು:

ಅಶೋಕ್ ಲೈಲೆಂಡ್ ಕಂಟೇನರ್ – ಅಂದಾಜು ಮೌಲ್ಯ ₹25 ಲಕ್ಷ, 10 ಜಾನುವಾರುಗಳು – ಅಂದಾಜು ಮೌಲ್ಯ ₹7 ಲಕ್ಷ,

ಆರೋಪಿ ವಿವರಗಳು:

ಆಸಿಪ್ (26), ಶಾಹಪುರ, ಮುಜಫ್ಫರನಗರ, ಉತ್ತರ ಪ್ರದೇಶ, ಶಾಹುಲ್ ಹಮೀದ ಕೆ., ಮೂಲ ತೆಲಂಗಾಣ, ಹೈದ್ರಾಬಾದ್, ಹಾಲಿ ವಾಸ: ಬೇಲಾ, ಕಾಸರಗೋಡು (ವಾಹನದ ಮಾಲೀಕ)

ಫಿರ್ಯಾದಿದಾರರು:

ಅಬುಬಕರ್ ಗಂಗಾವಳಿ (44), ಮದೀನಾ ಕಾಲೋನಿ, ಭಟ್ಕಳ, ಹಮೀದ (54), ಕಾಸರಗೋಡು, ಕೇರಳ.

ಘಟನೆಯ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳನ್ನು ವಾಹನ ಸಮೇತ ಬಂಧಿಸಿದರು. ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆಯನ್ನು ಉಪನಿರೀಕ್ಷಕ ನಾರಾಯಣ ನಾಯ್ಕ ಮುನ್ನಡೆಸುತ್ತಿದ್ದಾರೆ.

You may also like

News

ಕೋಮು ಸೌಹಾರ್ದತೆಯ ‘ರಾಜಮಾರ್ಗ’ – ಕಟ್ಟತ್ತಿಲ ದರ್ಗಾ-ಮಠದ ಸಂಪರ್ಕ ರಸ್ತೆ ಈಗ ಡಾಮರುಮಯ

ಧಾರ್ಮಿಕ ಸಾಮರಸ್ಯಕ್ಕೆ ಹೆಸರುವಾಸಿಯಾದ ಕಟ್ಟತ್ತಿಲದ ದರ್ಗಾ ಮತ್ತು ಮಠವನ್ನು ಬೆಸೆಯುವ ಪ್ರಮುಖ ಸಂಪರ್ಕ ರಸ್ತೆಯು ಈಗ ನವವಧುವಿನಂತೆ ಕಂಗೊಳಿಸುತ್ತಿದೆ. ಬಹುಕಾಲದ ಬೇಡಿಕೆಯಾಗಿದ್ದ ಈ ರಸ್ತೆಯ ಡಾಮರೀಕರಣ ಕಾಮಗಾರಿ
News

ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರ ಪ್ರಬಲ ವಾದವನ್ನು ಎತ್ತಿಹಿಡಿದ ಸುಳ್ಯ ನ್ಯಾಯಾಲಯ – ಆರೋಪಿ ದೋಷಮುಕ್ತ!

ದೀರ್ಘಕಾಲದ ವಿಚಾರಣೆಯ ನಂತರ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆರೋಪಿಯನ್ನು ದೋಷಮುಕ್ತಗೊಳಿಸಿ ಸುಳ್ಯ ನ್ಯಾಯಾಲಯವು ಆದೇಶ ಹೊರಡಿಸಿದೆ. ಈ ಮೂಲಕ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. ಪ್ರಕರಣದ

You cannot copy content of this page