August 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ಸಂತ ಅಂತೋನಿ ಆಶ್ರಮದಲ್ಲಿ ಜಪಮಾಲೆ ತಿಂಗಳ ಪ್ರಯುಕ್ತ ಭವ್ಯ ಮರಿಯಮ್ಮನವರ 2 ದಿವಸಗಳ ಜಪಾಮಾಲಾ ಪ್ರದರ್ಶನ

ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜರವರಿಂದ ಆಶೀರ್ವಚನ ಹಾಗೂ ಉದ್ಘಾಟನೆ

ನಾಳೆ ಅಕ್ಟೋಬರ್ 7 ರಂದು ಮಂಗಳವಾರ ಸಂಜೆ 8 ಗಂಟೆಗೆ ಮುಕ್ತಾಯ

ಜಪಮಾಲೆಗೆ ಮೀಸಲಾದ ತಿಂಗಳ ವಿಶೇಷ ಗೌರವವಾಗಿ, ಮಂಗಳೂರು ಧರ್ಮಕ್ಷೇತ್ರದ ಜೆಪ್ಪು ಸಂತ ಅಂತೋನಿ ಆಶ್ರಮವು ಮರಿಯಮ್ಮನವರ ಭಕ್ತಿಯ ಕೇಂದ್ರವಾಗಿ, ಇಂದು ಅಕ್ಟೋಬರ್ 6ರಂದು ಸೋಮವಾರ ಸಂಜೆ ಎರಡು ದಿವಸಗಳ ವಿಶೇಷ ಪ್ರದರ್ಶನವನ್ನು ಆಯೊಜೀಸಿದೆ. ಸಂತ ಅಂತೋನಿ ಆಶ್ರಮದ ವಾರ್ಷಿಕ ಭಕ್ತಿ ಕಾರ್ಯಕ್ರಮಗಳಲ್ಲಿ ಒಂದಾದ ಈ ಕಾರ್ಯಕ್ರಮವನ್ನು, ಜಪಮಾಲೆಯ ಮಾತೆಯ ಮೇಲಿನ ಭಕ್ತರ ಪ್ರೀತಿ ಮತ್ತು ಭಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ವಂದನೀಯ ಫಾದರ್ ಐವನ್ ಮಾಡ್ತಾರವರು ಸಂಯೋಜಿಸಿದ್ದಾರೆ.

ಈ ಪ್ರದರ್ಶನವನ್ನು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜರವರು ವಿಧ್ಯುಕ್ತವಾಗಿ ಆಶೀರ್ವದಿಸಿ, ಉದ್ಘಾಟಿಸಿದರು. ಜಪಮಾಲೆಯ ಅಪಾರ ಆಧ್ಯಾತ್ಮಿಕ ಶಕ್ತಿಯನ್ನು ಒತ್ತಿ ಹೇಳಿ, “ತನ್ನ ಎಲ್ಲಾ ಪ್ರತ್ಯಕ್ಷಗಳಲ್ಲಿ, ಮರಿಯಮ್ಮನವರ ಸಂದೇಶವು ಪಶ್ಚಾತ್ತಾಪ ಮತ್ತು ಪ್ರಾರ್ಥನೆಯಾಗಿದೆ” ಎಂದು ಹೇಳಿರುವ ಅವರು, ಜೀವನದ ಪರಿವರ್ತನೆಗೆ ಮತ್ತು ಸ್ವರ್ಗದ ಪ್ರಯಾಣಕ್ಕೆ ಜಪಮಾಲೆಯನ್ನು ಒಂದು ಪ್ರಮುಖ ಸಾಧನವಾಗಿ ಅಳವಡಿಸಿಕೊಳ್ಳಲು ನೆರೆದಿದ್ದವರನ್ನು ಒತ್ತಾಯಿಸಿದ್ದಾರೆ.

ಈ ಪ್ರದರ್ಶನವನ್ನು ವಂದನೀಯ ಫಾದರ್ ಐವನ್ ಮಾಡ್ತಾರವರು ಅಚ್ಚುಕಟ್ಟಾಗಿ ಆಯೋಜಿಸಿದ್ದು, ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ  ಹಾಗೂ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ಮತ್ತು ವಂದನೀಯ ಫಾದರ್ ನಿಶಾಂತ್ ರೊಡ್ರಿಗಸ್ ಇವರು ಸಹಾಕಾರ ನೀಡಿದ್ದಾರೆ.

ಈಗಾಗಲೇ 17 ಇಂತಹ ಪ್ರದರ್ಶನಗಳನ್ನು ಆಯೋಜಿಸಿರುವ ವಂದನೀಯ ಫಾದರ್ ಐವನ್ ಮಾಡ್ತಾರವರು ಈ ಕಾರ್ಯಕ್ರಮದ ಹಿಂದಿನ ಉದ್ದೇಶವನ್ನು ಹಂಚಿಕೊಂಡಿದ್ದಾರೆ. “ಜನರು ಮಾತೆ ಮರಿಯಮ್ಮನವರನ್ನು ಹೆಚ್ಚು ತಿಳಿದುಕೊಳ್ಳಲು, ಅವರನ್ನು ಪ್ರೀತಿಸಲು, ಅವರಲ್ಲಿ ಭಕ್ತಿಯನ್ನು ಬೆಳೆಸಲು ಮತ್ತು ನಮ್ಮ ಸ್ವರ್ಗೀಯ ಪ್ರಯಾಣಕ್ಕಾಗಿ ಅವರ ಮಧ್ಯಸ್ಥಿಕೆಯನ್ನು ಕೋರಲು ಸಹಾಯ ಮಾಡುವುದೇ ನಮ್ಮ ಗುರಿಯಾಗಿದೆ” ಎಂದು ಅವರು ಹೇಳುತ್ತಾರೆ.

ಪ್ರದರ್ಶನವು ಮರಿಯಮ್ಮನವರಿಗೆ ಸಂಬಂಧಿಸಿದ ವೈವಿಧ್ಯಮಯ ಮತ್ತು ಅಪಾರವಾದ ಕಲಾಕೃತಿಗಳನ್ನು ಒಳಗೊಂಡಿದೆ, ಅವುಗಳೆಂದರೆ:

  • ಸುಮಾರು 50 ವಿವಿಧ ರೀತಿಯ ಜಪಮಾಲೆಗಳು.
  • ವಿವಿಧ ರೀತಿಯ ಸ್ಕಾಪುಲರ್‌ಗಳು, ಪದಕಗಳು (ಅದ್ಭುತ ಪದಕಗಳು ಸೇರಿದಂತೆ), ಪೋಸ್ಟರ್‌ಗಳು ಮತ್ತು ಕಲಾಕೃತಿಗಳು.
  • ಎಂಬತ್ತು ವಿವಿಧ ಬೈಬಲ್ ಪ್ರತಿಮೆಗಳು ಮತ್ತು ಮರಿಯಮ್ಮನವರ ಪ್ರತ್ಯಕ್ಷಗಳ ಚಿತ್ರಣಗಳು, ಇದರಲ್ಲಿ ಪ್ರತಿಯೊಂದು ಲಿಟನಿ ಮನವಿಗಾಗಿ ವಿಶಿಷ್ಟ ಪ್ರತಿಮೆಗಳೂ ಸೇರಿವೆ.
  • ಮರಿಯಮ್ಮ ಮತ್ತು ಶಿಲುಬೆಯ ನಡುವಿನ ಆಳವಾದ ಸಂಬಂಧವನ್ನು ಸೂಚಿಸುವ ಶಿಲುಬೆಗಳ ಸಂಗ್ರಹ.
  • ಆಧ್ಯಾತ್ಮಿಕ ವಾಚನಕ್ಕಾಗಿ ಮರಿಯಮ್ಮನವರ ಕುರಿತಾದ ಸಾಹಿತ್ಯ.

ಈ ಅನುಭವವನ್ನು ಇನ್ನಷ್ಟು ಶ್ರೀಮಂತಗೊಳಿಸಲು, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ಮಿಸಿದ ವೀಡಿಯೊವನ್ನು ಸಂದರ್ಶಕರಿಗಾಗಿ ಪ್ರದರ್ಶಿಸಲಾಗುತ್ತಿದೆ. ಈ ವೀಡಿಯೊ ಜಪಮಾಲೆಯ ಇತಿಹಾಸ, ಅಂಗೀಕೃತ ಮರಿಯನ್ ಪ್ರತ್ಯಕ್ಷಗಳು ಮತ್ತು ಪ್ರಪಂಚದಾದ್ಯಂತದ ವಿವಿಧ ಮರಿಯನ್ ಚಿತ್ರಗಳ ವಿವರಗಳನ್ನು ನೀಡುತ್ತದೆ.

ಸಮಾರೋಪ ದಿನದ ಕಾರ್ಯಕ್ರಮ

ಎರಡು ದಿನಗಳ ಈ ಭಕ್ತಿ ಕಾರ್ಯಕ್ರಮದ ಸಮಾರೋಪವು ಮಂಗಳವಾರ, ಅಕ್ಟೋಬರ್ 7 ರಂದು ನಡೆಯಲಿದೆ. ಸಂಜೆಯ ಕಾರ್ಯಕ್ರಮದ ವಿವರಗಳು ಹೀಗಿವೆ:

  • ಸಂಜೆ 5:30: ಪವಿತ್ರ ಜಪಮಾಲೆ ಮತ್ತು ಮರಿಯನ್ ಸ್ತುತಿಗೀತೆಗಳು.
  • ಸಂಜೆ 6:00: ವಂದನೀಯ ಫಾರ್ ಐವನ್ ಮಾಡ್ತಾರವರಿಂದ ದೇವರ ವಾಕ್ಯ ಮತ್ತು ಪ್ರವಚನ.
  • ಸಂಜೆ 6:30: ಭಕ್ತಿಪೂರ್ವಕ ಕ್ಯಾಂಡಲ್‌ಲೈಟ್ ಮೆರವಣಿಗೆ.
  • ಸಂಜೆ 7:00: ಸರ್ವರಿಗಾಗಿ ಸಹಭೋಜನ.

ಮರಿಯಮ್ಮನವರ ಈ ಪ್ರದರ್ಶನವು ಆಶ್ರಮದ ವಸ್ತುಸಂಗ್ರಹಾಲಯದಲ್ಲಿ ಸಂಜೆ 8:00 ಗಂಟೆಗೆ ಮುಕ್ತಾಯಗೊಳ್ಳುವವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಎಲ್ಲರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ.

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page