April 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶೀಘ್ರದಲ್ಲೇ ಅಧಿಕೃತ Caller ID ಸೇವೆ ಆರಂಭ – ಸ್ಕ್ಯಾಮ್ ಕರೆಗಳಿಗೆ ಬೀಳಲಿದೆ ಕಡಿವಾಣ

ಇತ್ತೀಚಿನ ದಿನಗಳಲ್ಲಿ ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ ವಂಚಿಸುವ ಘಟನೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಆದರೆ ಇದೀಗ, ಈ ರೀತಿಯ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೂರಸಂಪರ್ಕ ಇಲಾಖೆ (DoT) ಹೊಸ ಯೋಜನೆ ಕೈಗೊಂಡಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಈಗ Calling Name Presentation (CNAP) ಎನ್ನುವ ಹೊಸ ಸೇವೆಗೆ ಹಸಿರು ನಿಶಾನೆ ನೀಡಿದೆ.

CNAP ಎಂದರೇನು ?

CNAP (Calling Name Presentation) ಎಂಬುದು ಹೊಸ ತಂತ್ರಜ್ಞಾನ ಸೇವೆಯಾಗಿದ್ದು, ಸಿಮ್ ಖರೀದಿಯ ಸಮಯದಲ್ಲಿ ನೀಡಿರುವ ಅಧಿಕೃತ ಹೆಸರನ್ನು ಕರೆ ಸ್ವೀಕರಿಸುವವರ ಮೊಬೈಲ್ ಪರದೆಯ ಮೇಲೆ ತೋರಿಸುತ್ತದೆ. ಅಂದರೆ, ನೀವು ಯಾರಿಗಾದರೂ ಕರೆ ಮಾಡಿದರೆ, ನಿಮ್ಮ ನಂಬರ್ ಜೊತೆಗೆ ನಿಮ್ಮ ಹೆಸರು ಕೂಡ ಎದುರಿನ ವ್ಯಕ್ತಿಯ ಪರದೆಯ ಮೇಲೆ ತೋರಿಸಲಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ ?

CNAP ಸೇವೆ 4G ಮತ್ತು 5G ನೆಟ್ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸಿಮ್ ನೋಂದಣಿ ಸಮಯದಲ್ಲಿ ನೀಡಿದ ಹೆಸರು ಮತ್ತು ಸಂಖ್ಯೆಗಳನ್ನು ನೆಟ್ವರ್ಕ್ ಆಪರೇಟರ್‌ಗಳು ಸಂಗ್ರಹಿಸುತ್ತಾರೆ. ಕರೆ ಮಾಡುವಾಗ ಈ ಮಾಹಿತಿಯು ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ. ಇದಕ್ಕಾಗಿ Truecaller ಅಥವಾ ಇತರೆ ಯಾವುದೇ ಥರ್ಡ್-ಪಾರ್ಟಿ ಆ್ಯಪ್ ಅಗತ್ಯವಿಲ್ಲ.

CNAP ಸೇವೆಯ ಪ್ರಯೋಜನಗಳು

✅ ವಂಚನಾ ಕರೆಗಳು ಮತ್ತು ಸ್ಕ್ಯಾಮ್‌ಗಳ ವಿರುದ್ಧ ರಕ್ಷಣೆ

✅ ಕರೆ ಸ್ವೀಕರಿಸುವ ಮುನ್ನ ಯಾರು ಕರೆ ಮಾಡುತ್ತಿದ್ದಾರೆ ಎಂಬ ಸ್ಪಷ್ಟತೆ

✅ ಗೌಪ್ಯತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಳ

TRAI ಹೇಳಿಕೆ

TRAI ಪ್ರಕಾರ, ಈ ಸೇವೆಯನ್ನು ಭಾರತದಲ್ಲಿನ ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಪೂರ್ವ ನಿಯೋಜಿತವಾಗಿ (default) ಸಕ್ರಿಯಗೊಳಿಸಲಾಗುವುದು. ಈ ಸೇವೆ ಆರಂಭವಾದ ಬಳಿಕ, ವಂಚನೆ ಕರೆಗಳು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

ಶೀಘ್ರದಲ್ಲೇ ಭಾರತದಲ್ಲಿ ಆಧಿಕೃತ Caller ID ವ್ಯವಸ್ಥೆ (CNAP) ಜಾರಿಗೆ ಬರಲಿದೆ. ಇದರಿಂದ ಫೋನ್ ಕರೆಗಳಲ್ಲಿ ನಿಜವಾದ ಹೆಸರು ತೋರಿಸಲಾಗುತ್ತದೆ — ಈ ಮೂಲಕ ದೇಶದಾದ್ಯಂತ ನಡೆಯುತ್ತಿರುವ ವಂಚನೆ ಕರೆಗಳಿಗೆ ಪರಿಣಾಮಕಾರಿ ಕಡಿವಾಣ ಬೀಳಲಿದೆ.

You may also like

News

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ – ಏಪ್ರಿಲ್ 18ಕ್ಕೆ ಪೂರ್ವಭಾವಿ ಸಭೆ ಹಾಗೂ ಸ್ವಾಗತ ಸಮಿತಿ ರಚನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಘಟಕದ ಸಹಯೋಗದಲ್ಲಿ ಮೇ 12ರಂದು ನಡೆಯಲಿರುವ ‘ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ’ದ ಸಿದ್ಧತೆಗಳು
News

ಮಂಗಳೂರು ಧರ್ಮಕ್ಷೇತ್ರದ ವಿವಿಧ ಧರ್ಮಗುರುಗಳ 2026 ನೇ ಸಾಲಿನ ವರ್ಗಾವಣೆ ಪಟ್ಟಿ ಪ್ರಕಟ

ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

You cannot copy content of this page