ಬಜಪೆಯಲ್ಲಿ ಇಂಡಿಯನ್ ಆಯಿಲ್ನ ಹೊಸ ಇಂಧನ ನಿಲ್ದಾಣ ಲೋಕಾರ್ಪಣೆ – ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಅವರಿಂದ ಆಶೀರ್ವಚನ ಹಾಗೂ ಉದ್ಘಾಟನೆ
ಶ್ರೇಷ್ಟಗುರು ಮ್ಯಾಕ್ಸಿಮ್ ನೊರೊನ್ಹಾ ಮತ್ತು ಐಒಸಿಎಲ್ ಅಧಿಕಾರಿ ಯೋಗೇಶ್ ಪಾಟಿದಾರ್ ಅವರಿಂದ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ

ಸೇವಾ ಮನೋಭಾವದಿಂದ ಮಾಡುವ ಕಾಯಕವೇ ನಿಜವಾದ ಆರಾಧನೆ ಎಂದು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಹೇಳಿದರು.
ಬಜಪೆಯಲ್ಲಿ ‘ಕಲಾ ಆರಾಧನಾ ಎಂಟರ್ಪ್ರೈಸಸ್’ ಅಡಿಯಲ್ಲಿ ಸ್ಥಾಪಿಸಲಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನ 473ನೇ ರೀಟೇಲ್ ಔಟ್ಲೆಟ್ ಅನ್ನು ಇಂದು ಮಾರ್ಚ್ 28ರಂದು ಶನಿವಾರ ಆಶೀರ್ವದಿಸಿ ಅವರು ಮಾತನಾಡಿದರು.







ಕಾರ್ಯಕ್ರಮದ ಮುಖ್ಯಾಂಶಗಳು:
* ಉದ್ಘಾಟನೆ: ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಟಗುರು ಅತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಮತ್ತು ಐಒಸಿಎಲ್ ಅಧಿಕಾರಿ ಯೋಗೇಶ್ ಪಾಟಿದಾರ್ ಅವರು ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.




* ಬಿಷಪ್ ಸಂದೇಶ: “ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಜನರಿಗೆ ಸೇವೆ ನೀಡಿದಾಗ ಅದು ಭಗವಂತನ ಆರಾಧನೆಯಾಗುತ್ತದೆ. ‘ಕಾಯಕವೇ ಕೈಲಾಸ’ ಎಂಬ ತತ್ವದಡಿ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು” ಎಂದು ಬಿಷಪ್ ಕರೆ ನೀಡಿದರು.









* ಐಒಸಿಎಲ್ ಬದ್ಧತೆ: ಬಜಪೆ ಪರಿಸರದ ಜನರಿಗೆ ಮತ್ತು ವಾಹನ ಸವಾರರಿಗೆ ಗುಣಮಟ್ಟದ ಇಂಧನ ಹಾಗೂ ಅತ್ಯುತ್ತಮ ಸೇವೆ ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.









ಕಾರ್ಯಕ್ರಮದಲ್ಲಿ ಐಒಸಿಎಲ್ ಅಧಿಕಾರಿಗಳಾದ ಅಂಕೇಶ್ ಕುಮಾರ್, ದಿನೇಶ್ ಕುಮಾರ್ ಮೀನಾ, ಮಂಗಳೂರು ಧರ್ಮಕ್ಷೇತ್ರದ ಚಾನ್ಸ್ ಲರ್ ಅತೀ ವಂದನೀಯ ಡಾ| ವಿಕ್ಟರ್ ಜಾರ್ಜ್ ಡಿಸೋಜ, ವಂದನೀಯ ಫಾದರ್ ಮ್ಯಾಕ್ಸಿಮ್ ರೊಸಾರಿಯೋ ಸೇರಿದಂತೆ ಹಲವು ಧರ್ಮಗುರುಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು. ಕೃಪಾ ಸಾಧನಾ ಫಾರ್ಮೇಶನ್ ಹೌಸ್ನ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.




ಈ ಹೊಸ ಔಟ್ಲೆಟ್ ಮೂಲಕ ಬಜಪೆ ಭಾಗದ ಸಾರ್ವಜನಿಕರಿಗೆ ಸುಸಜ್ಜಿತ ಇಂಧನ ಸೇವೆ ಲಭ್ಯವಾಗಲಿದೆ.

ವರದಿ ಹಾಗೂ ಫೋಟೊ
ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್
ನಿರ್ದೇಶಕರು, ಕೆನರಾ ಕಮ್ಯುನಿಕೇಷನ್ ಸೆಂಟರ್
ಮಂಗಳೂರು ಧರ್ಮಕ್ಷೇತ್ರ




