May 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಆದರ್ಶ ಶಿಕ್ಷಕ, ಪ್ರಗತಿಪರ ಕೃಷಿಕ ಕೃಷ್ಣ ಭಟ್ಟ ಎಸ್. ಇನ್ನಿಲ್ಲ

ಮಾಣಿ ಕರ್ನಾಟಕ ಪ್ರೌಢ ಶಾಲೆಯ ನಿವೃತ್ತ ಹಿಂದಿ ಅಧ್ಯಾಪಕರು

ವಿಟ್ಲದ ದೈಗೋಳಿ ಸಮೀಪದ ಸುಣ್ಣಂಗುಳಿ ಮನೆತನದವರಾದ, ನಿವೃತ್ತ ಹಿಂದಿ ಶಿಕ್ಷಕ 80ವರ್ಷ ಪ್ರಾಯದ ಕೃಷ್ಣ ಭಟ್ಟ ಎಸ್. ಅವರು ವಯೋಸಹಜ ಅನಾರೋಗ್ಯದಿಂದ ಮೇ 1ರಂದು ಶುಕ್ರವಾರ ನಿಧನರಾಗಿದ್ದಾರೆ. ವಿಟ್ಲ ಸಮೀಪದ ಕೊಡಪದವು ದಿವಾಣದಲ್ಲಿ ನೆಲೆಸಿದ್ದ ಅವರು, ತಮ್ಮ ಸರಳತೆ ಮತ್ತು ಕರ್ತವ್ಯನಿಷ್ಠೆಯ ಮೂಲಕ ಜನಮಾನಸದಲ್ಲಿ ಉಳಿದಿದ್ದರು.

ಗೌರವಪೂರ್ಣ ನುಡಿ ನಮನ:

ಕೃಷ್ಣ ಭಟ್ಟರು ಮಾಣಿಯ ಕರ್ನಾಟಕ ಹೈಸ್ಕೂಲ್‌ನಲ್ಲಿ ದೀರ್ಘಕಾಲ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದವರು. ಕೇವಲ ತರಗತಿಯ ಕೋಣೆಗೆ ಸೀಮಿತವಾಗದೆ, ಓರ್ವ ಪ್ರಗತಿಪರ ಕೃಷಿಕರಾಗಿಯೂ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಶಿಸ್ತುಬದ್ಧ ಜೀವನ ಮತ್ತು ಸಮಾಜಮುಖಿ ಚಿಂತನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಿದೆ.

ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನದ ಜೊತೆಗೆ ಸಂಸ್ಕಾರವನ್ನೂ ಬಿತ್ತುತ್ತಿದ್ದ ಇವರ ನಿಧನದಿಂದ ಶಿಕ್ಷಣ ಕ್ಷೇತ್ರ ಮತ್ತು ಕೃಷಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರ ವಿದ್ಯಾರ್ಥಿಗಳು ಪ್ರಾರ್ಥಿಸುತ್ತಾರೆ.

You may also like

News

ಸುರತ್ಕಲ್ ಕೊಲೆ ಮತ್ತು ದರೋಡೆ ಪ್ರಕರಣ – 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ಆರೋಪಿಯ ಬಂಧನ

ಕಳೆದ ಹನ್ನೆರಡು ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟುವಿನಲ್ಲಿ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 6 ವರ್ಷಗಳಿಂದ
News

ಜಮೀನು ಮತ್ತು ಮನೆಯ ಹಂಚಿಕೆ ತಕರಾರು – ಕಾರ್ಕಳದಲ್ಲಿ ಅಣ್ಣನ ಪ್ರಾಣ ತೆಗೆದ ತಮ್ಮ!

ಆರೋಪಿ ಹೆರಾಲ್ಡ್ ಡಿಸೋಜನ ಬಂಧನ ರಕ್ತ ಸಂಬಂಧಕ್ಕಿಂತ ಆಸ್ತಿಯೇ ದೊಡ್ಡದಾಯಿತೇ? ಹೌದು ಎನ್ನುತ್ತದೆ ಕಾರ್ಕಳದ ಹಿರಿಯಂಗಡಿಯಲ್ಲಿ ನಡೆದ ಈ ಘಟನೆ. ಜಮೀನು ಮತ್ತು ಮನೆಯ ಹಂಚಿಕೆ ವಿಚಾರವಾಗಿ

You cannot copy content of this page