July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ಎರಡು ದಿನಗಳ ‘ಹಲಸು ಮಾವು ಮೇಳ’

ಇಂದು ಜೂನ್ 20 ಮತ್ತು 21 ರಂದು ಕದ್ರಿ ಕಂಬಳ ರಸ್ತೆಯಲ್ಲಿ ವೈಭವದ ‘ಹಲಸು ಮಾವು ಮೇಳ’

ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಜಂಟಿ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವೈವಿಧ್ಯಮಯ ‘ಹಲಸು ಮಾವು ಮೇಳ’ ಕ್ಕೆ ಚಾಲನೆ ದೊರೆತಿದೆ. ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಮಲ್ಲಿಕಟ್ಟೆ ಬಳಿ ಇರುವ ‘ಮಂಜುಪ್ರಸಾದ’ ದಲ್ಲಿ ಜೂನ್ 20ರಂದು ಶನಿವಾರ ಮತ್ತು ಜೂನ್ 21ರಂದು ಭಾನುವಾರ ಈ ಮೇಳ ಆಯೋಜನೆಗೊಂಡಿದೆ. ದಿನಂಪ್ರತಿ ಬೆಳಿಗ್ಗೆ 7.00 ರಿಂದ ಸಂಜೆ 7.00 ರವರೆಗೆ ಗ್ರಾಹಕರಿಗೆ ವಿವಿಧ ತಳಿಯ ನೈಸರ್ಗಿಕ ಹಣ್ಣುಗಳನ್ನು ಖರೀದಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮೇಳದ ಪ್ರಮುಖ ಆಕರ್ಷಣೆಗಳು ಮತ್ತು ಕಾರ್ಯಕ್ರಮಗಳು:

* ಉದ್ಘಾಟನಾ ಸಮಾರಂಭ: ಜೂನ್ 20 ರಂದು ಬೆಳಿಗ್ಗೆ 10.00 ಗಂಟೆಗೆ ಡಾ. ಜೀವರಾಜ್ ಸೊರಕೆ ಅವರಿಂದ ಮೇಳದ ಉದ್ಘಾಟನೆ ನೆರವೇರಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾರಾಟ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.

* ವಿಶೇಷ ಗಣ್ಯರ ಉಪಸ್ಥಿತಿ: ರಾಮಕೃಷ್ಣ ಮಠದ ಶ್ರೀ ಶ್ರೀ ಜಿತಕಾಮಾನಂದ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಲಿದ್ದು, ಡಾ. ಎಂ. ಬಿ. ಪುರಾಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

* ಆರೋಗ್ಯ ಜಾಗೃತಿ ಮತ್ತು ಯೋಗ: ‘ಯೋಗ – ಸಾವಯವ ಆಹಾರ – ಆರೋಗ್ಯ ಭಾಗ್ಯ’ ಎಂಬ ಪರಿಕಲ್ಪನೆಯೊಂದಿಗೆ ಜೂನ್ 21ರಂದು ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಆಯುರ್ವೇದ ತಜ್ಞರಾದ ಡಾ. ಎನ್.ಟಿ. ಅಂಜನ್ ಉಪಸ್ಥಿತರಿರಲಿದ್ದಾರೆ.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page