July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರಾವಳಿಯಲ್ಲಿ ಕಿಂಗ್ ಖಾನ್ ಹವಾ – ಜೂನ್ 25ಕ್ಕೆ ಮಂಗಳೂರಿಗೆ ಬರಲಿದ್ದಾರೆ ಬಾಲಿವುಡ್ ಬಾದ್‌ಷಾ

ರೋಹನ್ ಕಾರ್ಪೊರೇಶನ್ ಮೆಗಾ ಪ್ಲಾನ್ – ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಶಾರುಖ್ ಖಾನ್ ಧಮಾಕಾ!

ಕರಾವಳಿ ಜನತೆಗೆ ಈಗ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರನ್ನು ಕಣ್ಣುಂಬಿಕೊಳ್ಳುವ ಸುವರ್ಣಾವಕಾಶ! ಜೂನ್ 25ರಂದು ಗುರುವಾರ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿರುವ ರೋಹನ್ ಕಾರ್ಪೊರೇಶನ್ ಸಂಸ್ಥೆಯ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ವಿಶೇಷ ಕಾರ್ಯಕ್ರಮಕ್ಕೆ ಬಾಲಿವುಡ್ ಬಾದ್‌ಷಾ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ವಿಶೇಷತೆಗಳು:

* ಸಮಯ: ಸಂಜೆ 4 ಗಂಟೆಯಿಂದಲೇ ಗಣ್ಯರ ಆಗಮನ ಆರಂಭವಾಗಲಿದೆ.

* ಪ್ರವೇಶ: ಕೇವಲ ಮುಂಚಿತವಾಗಿ ನೋಂದಾಯಿಸಿಕೊಂಡು, ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಅವಕಾಶ.

* ಗಣ್ಯರ ಸಮಾಗಮ: ರಾಜಕೀಯ, ಉದ್ಯಮ ಹಾಗೂ ಸಿನಿಮಾ ರಂಗದ ಪ್ರಮುಖರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

“ಜಾಗತಿಕ ಮಟ್ಟದ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ನಮ್ಮ ಕರಾವಳಿಗೆ ಕರೆತರುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆ” ಎಂದು ರೋಹನ್ ಕಾರ್ಪೊರೇಶನ್‌ನ ಡಾ. ರೋಹನ್ ಮೊಂತೇರೊ ಮತ್ತು ಡಿಯಾನ್ ಮೊಂತೇರೊ ತಿಳಿಸಿದ್ದಾರೆ. ಈ ಭವ್ಯ ಕಾರ್ಯಕ್ರಮದ ಕುರಿತು ಇಡೀ ಮಂಗಳೂರಿನಲ್ಲಿ ಈಗಿನಿಂದಲೇ ಭಾರಿ ಕ್ರೇಜ್ ಶುರುವಾಗಿದೆ.

* ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90355 64026

You may also like

News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ
News

Former CSST General Councillor Sr Josephette Passes Away

The Congregation of the Carmelite Sisters of Saint Teresa (CSST) is mourning the passing of Sr Josephette, former General Councillor

You cannot copy content of this page