August 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ICYM ಮಿಯಪದವು ಘಟಕದಿಂದ ‘ಮಳೆಯಲ್ಲಿ ಮಸ್ತಿ’ ಕ್ರೀಡೋತ್ಸವ ಸಂಭ್ರಮ

ICYM ಮಿಯಪದವು ಘಟಕದ ಆಶ್ರಯದಲ್ಲಿ ‘ಮಳೆಯಲ್ಲಿ ಮಸ್ತಿ’ ವಿನೂತನ ಮಳೆಯ ಆಟಗಳ ಕಾರ್ಯಕ್ರಮವು ಫಾತಿಮಾ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು.

ಐಸಿವೈಎಂ ಕಾರ್ಯದರ್ಶಿ ರೀಶನ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಂದನೀಯ ಡೇನಿಯಲ್ ಡಿಸೋಜ ಕ್ರೀಡಾಕೂಟವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಸಿಸ್ಟರ್ ಅಲ್ವಿನಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲುವಿಸ್ ಮೊಂತೆರೊ, ಕಾರ್ಯದರ್ಶಿ ಸಿಲ್ವಿಯಾ ಸಂತಾನಾಜ್, ಆಯೋಗಗಳ ಸಂಚಾಲಕ ಪ್ರದೀಪ್ ಡಿಸೋಜ, ಐಸಿವೈಎಂ ಸಂಯೋಜಕ ವಿನೋದ್ ಡಿಸೋಜ, ಅಧ್ಯಕ್ಷ ಮೆಲ್ವಿನ್ ಡಿಸೋಜ ಹಾಗೂ ಕ್ರೀಡಾ ಪ್ರತಿನಿಧಿ ರಿಕ್ಸನ್ ಮೊಂತೇರೊ ಉಪಸ್ಥಿತರಿದ್ದರು.

ಕ್ರೀಡಾ ಪ್ರತಿನಿಧಿ ರಿಕ್ಸನ್ ಮೊಂತೆರೊ ಸ್ವಾಗತಿಸಿದರು. ಬಳಿಕ ಸಂಜೆ 5 ಗಂಟೆಯವರೆಗೆ ವಿವಿಧ ವಿನೋದಭರಿತ ಮಳೆಯ ಆಟಗಳು ನಡೆದವು. ಐಸಿವೈಎಂ ಸದಸ್ಯರು ಆಟಗಳ ಆಯೋಜನೆ ಮತ್ತು ನಿರ್ವಹಣೆಯ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆ ಚಹಾದ ವ್ಯವಸ್ಥೆ ಮಾಡಲಾಗಿತ್ತು. ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸುವುದರ ಜೊತೆಗೆ ಭಾಗವಹಿಸಿದ ಎಲ್ಲಾ ತಂಡಗಳಿಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಐಸಿವೈಎಂ ಸದಸ್ಯೆ ಪ್ರಜ್ವಿತಾ ಡಿಸೋಜ ವಂದಿಸಿದರು. ಮಳೆಯ ನಡುವೆಯೂ ಸ್ಪರ್ಧಾಳುಗಳು ಅತ್ಯಂತ ಉತ್ಸಾಹದಿಂದ ವಿವಿಧ ಆಟಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

You may also like

News

ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ ಸ್ತ್ರೀ ಸಂಘಟನೆಯಿಂದ ‘ಬೆಂಕಿ ಇಲ್ಲದ ಅಡುಗೆ’ ಸ್ಪರ್ಧೆ – ಶಕ್ತಿನಗರ ಘಟಕಕ್ಕೆ ಪ್ರಥಮ ಬಹುಮಾನ

ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ ಸ್ತ್ರೀ ಸಂಘಟನೆಯ ವತಿಯಿಂದ ವಲಯ ಮಟ್ಟದ ಎಲ್ಲಾ ಸದಸ್ಯರಿಗಾಗಿ ಆಯೋಜಿಸಲಾಗಿದ್ದ “ಬೆಂಕಿ ಇಲ್ಲದ ಅಡುಗೆ” (Cooking Without Fire) ಸ್ಪರ್ಧೆಯು ಆಗಸ್ಟ್
News

ಕರ್ನಾಟಕ ಶಾಸಕಾಂಗಕ್ಕೆ ಹೊಸ ಸಾರಥಿಗಳು – ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್, ಡೆಪ್ಯೂಟಿ ಸ್ಪೀಕರ್ ಆಗಿ ಎ.ಎಸ್. ಪೊನ್ನಣ್ಣ

ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಪ್ರಮುಖ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯ ಶಾಸಕಾಂಗದ ಕಾರ್ಯಚಟುವಟಿಕೆಗಳಿಗೆ ಹೊಸ ನಾಯಕತ್ವ ಲಭಿಸಿದೆ. ಗದಗ ಜಿಲ್ಲೆಯ ರೋಣ

You cannot copy content of this page