MLC ಐವನ್ ಡಿಸೋಜ ಶಿಫಾರಸು – 8 ಜನ ಫಲಾನುಭವಿಗಳಿಗೆ 4.15 ಲಕ್ಷ ರೂಪಾಯಿ ಮುಖ್ಯಮಂತ್ರಿ ಪರಿಹಾರ ನಿಧಿ ಬಿಡುಗಡೆ
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರ ವಿಶೇಷ ಶಿಫಾರಸಿನ ಮೇರೆಗೆ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 8 ಮಂದಿ ಅರ್ಹ ಅರ್ಜಿದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು 4,15,502 ರೂಪಾಯಿ ಪರಿಹಾರ ಧನ ಮಂಜೂರಾಗಿದ್ದು, ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.


ಮಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಪರಿಹಾರ ಧನದ ಬಿಡುಗಡೆ ಪತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸಹಾಯಧನ ಪಡೆದ ವಿವರಗಳು ಈ ಕೆಳಗಿನಂತಿವೆ:

ಫಲಾನುಭವಿಗಳ ವಿವರ:
* ಅರುಣಾ ಐ., ಸುರತ್ಕಲ್: 95,290 ರೂಪಾಯಿ
* ನಬಿಸಾ, ಸುಳ್ಯ: 79,747 ರೂಪಾಯಿ
* ಕುಮಾರಿ ಪಾಯಲ್ ಸುವರ್ಣ, ಕುಲಶೇಖರ: 62,788 ರೂಪಾಯಿ
* ಅಬ್ದುಲ್ ಖಾದರ್, ಮಂಗಳೂರು: 59,066 ರೂಪಾಯಿ
* ಪುಷ್ಪಲತಾ, ಕುದ್ರೋಳಿ: 31,893 ರೂಪಾಯಿ
* ಹೈದರ್ ಅಬ್ದುಲ್ ರೆಹಮಾನ್: 32,835 ರೂಪಾಯಿ
* ರಂಜಿತ್ ಜಿ.: 25,000 ರೂಪಾಯಿ
* ಹಮೀದ್, ಮಂಗಳೂರು: 22,685 ರೂಪಾಯಿ
* ಮಾಲತಿ ಕುಂದರ್, ಮಂಗಳೂರು: 6,193 ರೂಪಾಯಿ

ಅನಾರೋಗ್ಯದಿಂದ ಸಂಕಷ್ಟಕ್ಕೀಡಾದ ಬಡ ಕುಟುಂಬಗಳಿಗೆ ಈ ಪರಿಹಾರ ಧನವು ಚಿಕಿತ್ಸಾ ವೆಚ್ಚ ಭರಿಸಲು ಆಸರೆಯಾಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.




