ಕೊಳ್ನಾಡು ರೈತರ ಮೊಗದಲ್ಲಿ ಮಂದಹಾಸ – ₹36 ಲಕ್ಷ ವೆಚ್ಚದಲ್ಲಿ ಕಾಡುಮಠ ಬಸ್ತಿಗುಂಡಿ ಆಣೆಕಟ್ಟು ನವೀಕರಣಕ್ಕೆ ಚಾಲನೆ
MLC ಮಂಜುನಾಥ್ ಭಂಢಾರಿ ಅವರ ವಿಶೇಷ ಆಸಕ್ತಿ ಹಾಗೂ ಶಿಫಾರಸ್ಸಿನ ಮೇಲೆ ಮಂಜೂರು

ವಿಟ್ಲದ ಕೊಳ್ನಾಡು ಗ್ರಾಮದ ಕೃಷಿಕರ ಬಹುಕಾಲದ ಬೇಡಿಕೆಯಾಗಿದ್ದ ಕಾಡುಮಠ ಬಸ್ತಿಗುಂಡಿ ಕಿಂಡಿ ಆಣೆಕಟ್ಟು ನವೀಕರಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಶಾಸಕರಾದ ಮಂಜುನಾಥ ಭಂಡಾರಿ ಅವರ ವಿಶೇಷ ಆಸಕ್ತಿ ಹಾಗೂ ಶಿಫಾರಸ್ಸಿನ ಮೇರೆಗೆ 36 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

* ಆಧುನಿಕ ತಂತ್ರಜ್ಞಾನದ ಬಳಕೆ: ಹಳೆಯ ಕಾಲದ ಮರದ ಹಲಗೆಗಳ ಬದಲಿಗೆ, ನೀರಿನ ಸೋರಿಕೆ ತಡೆಗಟ್ಟಲು ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಆಧುನಿಕ ಕಬ್ಬಿಣ ಹಾಗೂ ಫೈಬರ್ ಹಲಗೆಗಳನ್ನು ಅಳವಡಿಸಲಾಗುತ್ತದೆ.
* ರೈತರಿಗೆ ಪ್ರಯೋಜನ: ಈ ಯೋಜನೆಯಿಂದ ಕಾಡುಮಠ, ಕುಡ್ತಮುಗೇರು ಮತ್ತು ಕುದ್ರಿಯಾ ಭಾಗದ ನೂರಾರು ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಬಲ ಸಿಗಲಿದೆ.

* ಜನಪ್ರತಿನಿಧಿಗಳ ಪ್ರಯತ್ನ: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹಾಗೂ ಕೊಳ್ನಾಡು ಕಾಂಗ್ರೆಸ್ ವಲಯಾಧ್ಯಕ್ಷ ಪವಿತ್ರ ಪೂಂಜಾ ಅವರ ಮನವಿಗೆ ಶಾಸಕರು ತಕ್ಷಣ ಸ್ಪಂದಿಸಿದ್ದಾರೆ.
* ಟೆಂಡರ್ ಪ್ರಕ್ರಿಯೆ: ಪ್ರಸ್ತುತ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. ಇತರ ಬಾಕಿ ಇರುವ ಸಣ್ಣ ನೀರಾವರಿ ಯೋಜನೆಗಳನ್ನೂ ಹಂತ ಹಂತವಾಗಿ ಪೂರ್ಣಗೊಳಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.




ಕ್ಷೇತ್ರದಲ್ಲಿ ಶಾಸಕರಿಲ್ಲದಿದ್ದರೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗದಂತೆ ರಸ್ತೆ, ನೀರು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರ ಕೆಲಸ ಮಾಡುತ್ತಿರುವ ನಾಯಕರ ಇಚ್ಛಾಶಕ್ತಿಯನ್ನು ಕೊಳ್ನಾಡು ಭಾಗದ ನಾಗರಿಕರು ಮತ್ತು ರೈತ ಬಂಧುಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.



