April 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಲ್ಲಿಪಾದೆ ಸೈಂಟ್ ಜೋನ್ಸ್ ಶಾಲೆಗೆ SSLC ಪರೀಕ್ಷೆಯಲ್ಲಿ ಶೇ.100 ಫಲಿತಾಂಶ – ಪೂರ್ವಿ ಶೆಟ್ಟಿ ಪ್ರಥಮ

ಅಭಿನಂದನೆ ಸಲ್ಲಿಸಿದ ಚರ್ಚ್ ಧರ್ಮಗುರು ಫಾದರ್ ರೋಬರ್ಟ್ ಡಿಸೋಜ

ಬಂಟ್ವಾಳ ತಾಲೂಕು ಅಲ್ಲಿಪಾದೆಯ ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಒಟ್ಟು 48 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದು, ಶಾಲೆಗೆ ಹೆಮ್ಮೆ ತಂದಿದ್ದಾರೆ.

ವಿದ್ಯಾರ್ಥಿನಿ ಪೂರ್ವಿ ಶೆಟ್ಟಿ 607 ಅಂಕಗಳೊಂದಿಗೆ (97.12%) ಪ್ರಥಮ ಸ್ಥಾನ ಪಡೆದಿದ್ದಾರೆ. ಪೂರ್ವಿ ಜಿ. ಹಾಗೂ ಶೋಧನ್ ಇಬ್ಬರೂ 600 ಅಂಕಗಳೊಂದಿಗೆ (96%) ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.

ಇತರ ವಿದ್ಯಾರ್ಥಿಗಳಲ್ಲಿ ಅಕ್ಷಯಾ (599 – 95.84%), ಆ್ಯರನ್ ಡಿಸೋಜ (596 – 95.36%), ಪ್ರಾಪ್ತಿ (595 – 95.20%), ಅನುಷಾ ವಿ.ಎಸ್. (590 – 94.40%), ನಂದಿತಾ ಹಾಗೂ ಸಾನ್ವಿ ವಿ. ಜೈನ್ (579 – 92.64%), ಕ್ಯಾಲ್ವಿನಾ ಲೋಬೊ (572 – 91.52%), ಜನ್ವಿತ್ (569 – 91.04%), ಕಾವ್ಯ (568 – 90.88%), ಜಸ್ಮಿತಾ ಮತ್ತು ಯಶ್ವಿತ್ (566 – 90.56%), ಚಿಂತನ್ (565 – 90.40%), ಎಂ. ಅನುಷ್ಕಾ (561 – 89.76%), ಸಿಂಚನಾ (560 – 89.60%), ಮೀರಾ ಆರ್. (556 – 88.96%), ಅಶಿತಾ (554 – 88.64%), ದೀಪಾ ಶೆನೊಯ್ ಹಾಗೂ ಗ್ರೀಷ್ಮಾ (553 – 88.48%), ಚಿತ್ರೇಶ್ (552 – 88.32%), ರಕ್ಷಾ (546 – 87.36%), ಅನ್ವಿತಾ (535 – 85.60%), ದಿಗಂತ್ (533 – 85.28%), ಎಂ.ತ್ವಾಹಿಬ್ (526 – 84.16%), ಪವನ್ (521 – 83.36%), ಎಂ.ಎ. ಹಾಸ್ವಿಲ್ (519 – 83.04%), ಪ್ರಾಪ್ತಿ (514 – 82.24%), ತನ್ವಿ (513 – 82.08%), ದೀಕ್ಷಾ (511 – 81.76%), ಅರ್ವಿನ್ ಲೋಬೊ (509 – 81.44%) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು ಫಲಿತಾಂಶದಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 15 ಪ್ರಥಮ ಶ್ರೇಣಿ ಹಾಗೂ 7 ದ್ವಿತೀಯ ಶ್ರೇಣಿ ಪಡೆದಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅಲ್ಲಿಪಾದೆ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ರೋಬರ್ಟ್ ಡಿಸೋಜ, ಶಾಲಾ ಸಂಚಾಲಕಿ ಭಗಿನಿ ನರ್ಸಿಜಾ ಸಿಕ್ವೇರಾ, ಮುಖ್ಯ ಶಿಕ್ಷಕಿ ಭಗಿನಿ ದೀಪಾ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

You may also like

News

ಜೂನ್ 1 ರಿಂದ ಮಂಗಳೂರು ಧರ್ಮಕ್ಷೇತ್ರದ ನೂತನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಫಾದರ್ ರೂಪೇಶ್ ಮಾಡ್ತ

ಬಿಷಪ್ ಪೀಟರ್ ಪಾವ್ಲ್ ಆದೇಶ ಮಂಗಳೂರು ಧರ್ಮಕ್ಷೇತ್ರದ ನೂತನ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ (PRO) ವಂದನೀಯ ಫಾದರ್ ರೂಪೇಶ್ ಅಶೋಕ್ ಮಾಡ್ತ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು
News

SKDRDP – LIC ಸಹಭಾಗಿತ್ವ: ರಾಜ್ಯದ 365 ಗ್ರಾಮಗಳಿಗೆ ರೂಪಾಯಿ 1.42 ಕೋಟಿ ವೆಚ್ಚದ ಮೂಲಸೌಕರ್ಯ ಭಾಗ್ಯ – CEO ಅನಿಲ್ ಕುಮಾರ್ ಎಸ್.ಎಸ್.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಮತ್ತು ಭಾರತೀಯ ಜೀವ ವಿಮಾ ನಿಗಮದ (LIC) ಜಂಟಿ ಆಶ್ರಯದಲ್ಲಿ ರಾಜ್ಯದ 365 ಹಳ್ಳಿಗಳನ್ನು ‘ವಿಮಾ ಗ್ರಾಮ’ಗಳೆಂದು ಗುರುತಿಸಲಾಗಿದ್ದು,

You cannot copy content of this page