April 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೊಳ್ನಾಡು ಗ್ರಾಮಕ್ಕೆ ಬಂಪರ್ ಕೊಡುಗೆ – ₹65 ಲಕ್ಷ ವೆಚ್ಚದ ನೂತನ ಆರೋಗ್ಯ ಉಪಕೇಂದ್ರ ಮಂಜೂರು!

ಸುಭಾಶ್ಚಂದ್ರ ಶೆಟ್ಟಿ ಅವರ ನಿರಂತರ ಶ್ರಮಕ್ಕೆ ಸಂದ ಜಯ

ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ನೂತನ ಆರೋಗ್ಯ ಮತ್ತು ಕ್ಷೇಮ ಕೇಂದ್ರದ (Health and Wellness Centre) ಕಟ್ಟಡ ನಿರ್ಮಾಣಕ್ಕೆ ಭರ್ಜರಿ ₹65 ಲಕ್ಷ ಅನುದಾನ ಮಂಜೂರಾಗಿದೆ.

ಶಾಸಕ ಮಂಜುನಾಥ ಭಂಡಾರಿ ಅವರ ವಿಶೇಷ ಆಸಕ್ತಿ:

ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರ ಸಮರ್ಥ ಶಿಫಾರಸ್ಸಿನ ಮೇರೆಗೆ ಈ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಗ್ರಾಮದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಅವರು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಈಗ ಫಲ ಸಿಕ್ಕಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ.

ಸುಭಾಶ್ಚಂದ್ರ ಶೆಟ್ಟಿಯವರ ನಿರಂತರ ಶ್ರಮಕ್ಕೆ ಸಂದ ಜಯ:

ಕೊಳ್ನಾಡು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಸುದೀರ್ಘ ಪ್ರಯತ್ನ ಮತ್ತು ದೂರದೃಷ್ಟಿಯ ಫಲವಾಗಿ ಈ ಯೋಜನೆ ಸಾಧ್ಯವಾಗಿದೆ. ಗ್ರಾಮಸ್ಥರಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಸಿಗಬೇಕು ಎಂಬ ಅವರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ.

ಯೋಜನೆಯ ಮುಖ್ಯಾಂಶಗಳು:

* ಒಟ್ಟು ವೆಚ್ಚ: ₹65 ಲಕ್ಷ ರೂಪಾಯಿಗಳು.

* ಸೌಲಭ್ಯಗಳು: ತಾಯಿ-ಮಗು ಆರೈಕೆ, ಲಸಿಕಾ ಅಭಿಯಾನ, ತುರ್ತು ಚಿಕಿತ್ಸೆ ಮತ್ತು ಮೂಲಭೂತ ತಪಾಸಣೆಗಳಿಗೆ ಪ್ರತ್ಯೇಕ ವ್ಯವಸ್ಥೆ.

* ವಿಸ್ತರಣೆ: ಕುಳಾಲು ಮಾತ್ರವಲ್ಲದೆ, ಕೊಳ್ನಾಡು ಗ್ರಾಮ ಪಂಚಾಯತ್ ಬಳಿ ಹಾಗೂ ಸುರಿಬೈಲ್ ಉಪಕೇಂದ್ರಕ್ಕೂ ತಲಾ ₹65 ಲಕ್ಷದಂತೆ ಅನುದಾನ ಮಂಜೂರಾಗಿದ್ದು, ಇಡೀ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆದಂತಾಗಿದೆ.

“ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬುದು ನಮ್ಮ ಆಶಯ. ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಕಾಳಜಿ ಮತ್ತು ಶಾಸಕರ ಸಹಕಾರದಿಂದ ಈ ಯೋಜನೆ ಸಾಕಾರಗೊಂಡಿದೆ ಎಂದು ಸ್ಥಳೀಯ ಗ್ರಾಮಸ್ಥರ ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಥಳ ಗುರುತಿಸುವಿಕೆಯಿಂದ ಹಿಡಿದು ಅನುದಾನ ಬಿಡುಗಡೆಯವರೆಗೆ ಸಮನ್ವಯಕಾರರಾಗಿ ಕೆಲಸ ಮಾಡಿದ ಸುಭಾಶ್ಚಂದ್ರ ಶೆಟ್ಟಿ ಮತ್ತು ಅಭಿವೃದ್ಧಿ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಮಂಜುನಾಥ ಭಂಡಾರಿ ಅವರಿಗೆ ಕೊಳ್ನಾಡು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

You may also like

News

ಪಾಲ್ದನೆ ಚರ್ಚ್‌ನಲ್ಲಿ ಭಕ್ತಿಪೂರ್ವಕ ‘ಪ್ರಥಮ ಪರಮ ಪ್ರಸಾದ’ ಸಮಾರಂಭ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನಲ್ಲಿ ಇಂದು ಏಪ್ರಿಲ್ 26ರಂದು ಭಾನುವಾರ ಆರು  ಮಕ್ಕಳು ಭಕ್ತಿ ಮತ್ತು ಸಡಗರದೊಂದಿಗೆ ಪ್ರಥಮ ಪರಮ ಪವಿತ್ರ ಪ್ರಸಾದವನ್ನು
News

‘WORLD HOMOEOPATHY DAY 2026’ Celebrated at Father Muller Homoeopathic Medical College & Hospital Deralakatte

‘World Homoeopathy Day 2026’ was celebrated on 25th April Saturday, at Father Muller Homoeopathic Medical College & Hospital, Deralakatte, Mangalore,

You cannot copy content of this page