August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ – ಸಮಸ್ಯೆಗಳ ವಿರುದ್ಧ ಒಕ್ಕೊರಲಿನ ಹೋರಾಟಕ್ಕೆ ಬೆಳ್ತಂಗಡಿಯಲ್ಲಿ ನಾಂದಿ!

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೋಳಿ ಸಾಕಾಣಿಕೆ ರೈತರ ಹಿತರಕ್ಷಣೆಗಾಗಿ ಹೋರಾಡುತ್ತಿರುವ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ’ದ ಮಹತ್ವದ ಮಹಾಸಭೆಯು ಇತ್ತೀಚೆಗೆ ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ ಒಕ್ಕೂಟದ ಮುಂಬರುವ ದಿನಗಳ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಗಿದ್ದು, ಕೇಂದ್ರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ರೈತರ ಹಿತರಕ್ಷಣೆಗೆ ಕಠಿಣ ನಿರ್ಣಯ:

ಪ್ರಸ್ತುತ ಕೋಳಿ ಸಾಕಾಣಿಕೆದಾರರು ಎದುರಿಸುತ್ತಿರುವ ಹತ್ತಾರು ಜ್ವಲಂತ ಸಮಸ್ಯೆಗಳ ಕುರಿತು ಸಭೆಯಲ್ಲಿ ಗಂಭೀರವಾದ ಸಮಾಲೋಚನೆ ನಡೆಸಲಾಯಿತು. ಕಂಪನಿಗಳ ನೀತಿಗಳು ಹಾಗೂ ಮಾರುಕಟ್ಟೆಯ ಏರುಪೇರುಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಯಲು, ಶೀಘ್ರದಲ್ಲೇ ಸಂಬಂಧಪಟ್ಟ ಕಂಪನಿಗಳ ಮಾಲೀಕರು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ನೇರ ಮಾತುಕತೆ ನಡೆಸಲು ನಿರ್ಧರಿಸಲಾಯಿತು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಸಮಿತಿಯು ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಒಕ್ಕೂಟದ ಮುಖಂಡರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ನೂತನ ಸಾರಥಿಗಳ ವಿವರ:

ಒಕ್ಕೂಟವನ್ನು ಮುನ್ನಡೆಸಲು ಆಯ್ಕೆಯಾದ ಪ್ರಮುಖ ಪದಾಧಿಕಾರಿಗಳ ವಿವರ ಇಲ್ಲಿದೆ:

* ಅಧ್ಯಕ್ಷರು: ಸೈಯದ್ ಹಸನ್

* ಉಪಾಧ್ಯಕ್ಷರು: ಕೂಸಪ್ಪ ಶೆಟ್ಟಿ, ಪ್ರದೀಪ್ ಕುಮಾರ್ ವಾಲ್ಪಡಿ, ಪ್ರಕಾಶ್ ರಾಮಕುಂಜ

* ಪ್ರಧಾನ ಕಾರ್ಯದರ್ಶಿ: ಅಶ್ವಿನ್ ಕುಮಾರ್ ಬಿ. ಕೆ.

* ಜೊತೆ ಕಾರ್ಯದರ್ಶಿಗಳು: ಜಯರಾಮ್ ಶೆಟ್ಟಿ, ಅಶ್ವಿನಿ ಬಿ.

* ಕೋಶಾಧಿಕಾರಿ: ಕೇಶವ ಕೊಯ್ಯುರು

* ಸಂಘಟನಾ ಕಾರ್ಯದರ್ಶಿಗಳು: ಸುರೇಂದ್ರ ಬೆದ್ರ, ರಿತೇಶ್ ಸ್ಟ್ರೆಲ್ಲಾ ಕೊಕ್ಕಡ, ರಾಜೇಶ್ ಸುವರ್ಣ ನೈನಾಡು, ಅಬ್ದುಲ್ ಅಜೀಜ್, ರವೀಂದ್ರ ಕಾಂಚನ ಪುತ್ತೂರು

* ಕಾರ್ಯಕಾರಿ ಸಮಿತಿ ಸದಸ್ಯರು: ಸೂರಜ್ ಬೆದ್ರ, ರಾಜೇಶ್ ಪಟ್ರಮೆ, ದಾಮೋದರ ವಗ್ಗ, ಮೋಹನ್ ದಾಸ್ ಶೆಟ್ಟಿ ಕಡಬ, ಹರಿಪ್ರಸಾದ್ ಹೆಡ್ಯ, ರವಿ ಕಾಶಿಪಟ್ನ, ಪ್ರಸಾದ್ ರೈ, ಲಾರೆನ್ಸ್ M.R. ಚಿಬಿದ್ರೆ

ರೈತರ ಏಳಿಗೆಯೇ ಧೇಯವಾಗಿಸಿಕೊಂಡು ರಚನೆಯಾಗಿರುವ ಈ ಸಮಿತಿಯು ಅವಳಿ ಜಿಲ್ಲೆಗಳ ಕೋಳಿ ಸಾಕಾಣಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page