August 20, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬೈ ಕನ್ನಡಿಗರ ಆಶಾಕಿರಣ, ಬಂಟ್ವಾಳದ ಸಮಾಜಸೇವಕ ಆಂಬ್ರೋಜ್ ಡಿಸಿಲ್ವಾ ವಿಧಿವಶ – ಆಗಸ್ಟ್ 21ಕ್ಕೆ ಅಂತ್ಯಕ್ರಿಯೆ

ಮೂರು ದಶಕಗಳಿಗೂ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿ, ಹಲವಾರು ಯುವಕರ ಬಾಳಿಗೆ ಆಸರೆಯಾಗಿದ್ದ ಅಮ್ಟಾಡಿ ನಿವಾಸಿ 56 ವರ್ಷ ಪ್ರಾಯದ ಆಂಬ್ರೋಜ್ ಡಿಸಿಲ್ವಾ ಅವರು ಅಲ್ಪಕಾಲದ ಅನಾರೋಗ್ಯದಿಂದ ಆಗಸ್ಟ್ 19ರಂದು ಬುಧವಾರ ನಿಧನರಾದರು.

ದುಬೈನಲ್ಲಿ ಸತತ 33 ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿದ್ದ ಆಂಬ್ರೋಜ್ ಅವರು, ಕರಾವಳಿ ಭಾಗದ 50ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ದುಬೈನಲ್ಲಿ ಉದ್ಯೋಗ ಒದಗಿಸಿ ಅವರ ಕುಟುಂಬಗಳಿಗೆ ನೆರವಾಗಿದ್ದರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದ ಅವರು, ಸಮಾಜಮುಖಿ ಕಾರ್ಯಗಳ ಮೂಲಕ ಪ್ರೀತಿಪಾತ್ರರಾಗಿದ್ದರು.

ಮೂರು ತಿಂಗಳ ಹಿಂದಷ್ಟೇ ಸೇವೆಯಿಂದ ನಿವೃತ್ತಿಗೊಂಡು ಸ್ವಗ್ರಾಮ ಅಮ್ಟಾಡಿಗೆ ಆಗಮಿಸಿದ್ದ ಅವರು, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಅಂತ್ಯಕ್ರಿಯೆಯ ವಿವರ:

ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆಗಸ್ಟ್ 21ರಂದು, ಶುಕ್ರವಾರ ನೆರವೇರಲಿವೆ.

* ಮಧ್ಯಾಹ್ನ 3:00 ಗಂಟೆಗೆ: ‘ಜಾಸ್ ವಿಲ್ಲೆ’ ನಿವಾಸದಿಂದ ಅಂತಿಮ ಯಾತ್ರೆ ಪ್ರಾರಂಭ.

* ಮಧ್ಯಾಹ್ನ 3:30 ಗಂಟೆಗೆ: ಬಂಟ್ವಾಳದ ಮೊಡಂಕಾಪ್ ಬಾಲ ಯೇಸು ದೇವಾಲಯದಲ್ಲಿ ಪವಿತ್ರ ಬಲಿಪೂಜೆ ಹಾಗೂ ಅಂತ್ಯಕ್ರಿಯೆ.

You may also like

News

ಹನೂರು ಶೂಟೌಟ್ ಪ್ರಕರಣ – ಆರ್ಚ್‌ಬಿಷಪ್ ಪೀಟರ್ ಮಚಾದೊ ಬೆಂಬಲಕ್ಕೆ ನಿಂತ DAPC; ನ್ಯಾಯಾಂಗ ತನಿಖೆಗೆ ಆಗ್ರಹ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಚಕಮಕಿ ಮತ್ತು ಮೂವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್‌ಬಿಷಪ್ ಪರಮ ಪೂಜ್ಯ
News

ಸ್ನೇಹ ಸದನದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಅಗತ್ಯ ವಸ್ತುಗಳ ವಿತರಣೆ

80 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 15ರಂದು ಕಾರವಾರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಉರ್ವಾ ಹಾಗೂ ವಾಲೆನ್ಸಿಯಾ ಶಾಖೆಗಳ ಜಂಟಿ ಆಶ್ರಯದಲ್ಲಿ ಗುರುಪುರ

You cannot copy content of this page